ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು
Choose an available translation of this Hadeeth
Hadeeth text
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು."
Explanation
Benefits
ಹದೀಸ್ನ ಜನರ ಶ್ರೇಷ್ಠತೆ ಮತ್ತು ಅದನ್ನು ಕಲಿಯುವ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
ಸಂಶೋಧನೆ ಮತ್ತು ಅರ್ಥಗ್ರಹಣದಲ್ಲಿ ಪರಿಣಿತರಾದ ವಿದ್ವಾಂಸರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
ಸಹಾಬಿಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ ಅವರು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸನ್ನು ಕೇಳಿ ಅದನ್ನು ನಮಗೆ ತಲುಪಿಸಿದ್ದಾರೆ.
ಹದೀಸ್ ವರದಿ ಮಾಡುವವನಿಗೆ ಪಾಂಡಿತ್ಯವಿರಬೇಕಾದುದು ಷರತ್ತಲ್ಲ, ಬದಲಿಗೆ ನೆನಪಿಟ್ಟುಕೊಳ್ಳುವುದು ಮಾತ್ರ ಅವನ ಷರತ್ತಾಗಿದೆ. ಆದರೆ ಕರ್ಮಶಾಸ್ತ್ರಜ್ಞನಿಗೆ ಪಾಂಡಿತ್ಯ ಮತ್ತು ಆಳವಾದ ಚಿಂತನೆ ಎರಡೂ ಇರುವುದು ಅತ್ಯಗತ್ಯವಾಗಿದೆ ಎಂದು ಇದರಲ್ಲಿ ವಿವರಿಸಲಾಗಿದೆ.
ಇಬ್ನ್ ಉಯೈನಾ ಹೇಳುತ್ತಾರೆ: ಈ ಹದೀಸಿನಲ್ಲಿ ವಿವರಿಸಿರುವಂತೆ, ಹದೀಸ್ ಕಲಿಯುವ ಪ್ರತಿಯೊಬ್ಬರ ಮುಖದಲ್ಲೂ ಒಂದು ಪ್ರಕಾಶ (ಚ್ಯೆತನ್ಯ) ವಿಲ್ಲದೆ ಇರುವುದಿಲ್ಲ.
ಮುಹದ್ದಿಸೀನ್ಗಳ (ಹದೀಸ್ ವಿದ್ವಾಂಸರು) ಪ್ರಕಾರ ನೆನಪಿಟ್ಟುಕೊಳ್ಳುವುದು ಎರಡು ವಿಧಗಳಲ್ಲಿವೆ: ಒಂದು - ಹೃದಯ ಮತ್ತು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳುವುದು, ಇನ್ನೊಂದು - ಪುಸ್ತಕ ಮತ್ತು ಬರಹದಲ್ಲಿ ನೆನಪಿಟ್ಟುಕೊಳ್ಳುವುದು. ಇವೆರಡನ್ನೂ ಹದೀಸ್ನಲ್ಲಿನ ಪ್ರಾರ್ಥನೆಯು ಒಳಗೊಳ್ಳುತ್ತದೆ.
ಜನರ ತಿಳುವಳಿಕೆಯ ಮಟ್ಟಗಳು ವಿಭಿನ್ನವಾಗಿರುತ್ತವೆ. ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಕೆಲವೊಮ್ಮೆ ಪಾಂಡಿತ್ಯವನ್ನು ಸಾಗಿಸುವವನು ಪಂಡಿತನಾಗಿರುವುದಿಲ್ಲ.
Attribution
Categories
Share hadeeth
Sharing options · 0 Total shares

