ಅಲ್ಲಾಹನಾಣೆ, ನಿಮ್ಮಲ್ಲೊಬ್ಬನು ಯಾವುದೇ ವಸ್ತುವನ್ನು ಅದಕ್ಕೆ ಹಕ್ಕಿಲ್ಲದೆ ತೆಗೆದುಕೊಂಡರೆ, ಅವನು ಪುನರುತ್ಥಾನ ದಿನದಂದು ಅದನ್ನು ಹೊತ್ತುಕೊಂಡು ಅಲ್ಲಾಹನನ್ನು ಭೇಟಿಯಾಗದೇ ಇರಲಾರನು
ಅಬೂ ಹುಮೈದ್ ಅಸ್ಸಾಇದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬನೂ ಸುಲೈಮ್ ಗೋತ್ರದ ಸದಕಾಗಳನ್ನು (ಝಕಾತ್) ವಸೂಲಿ ಮಾಡಲು ಇಬ್ನುಲ್-ಲುತ್ಬಿಯ್ಯಾ ಎಂಬ ವ್ಯಕ್ತಿಯನ್ನು ನಿಯೋಜಿಸಿದರು. ಅವನು (ಝಕಾತ್ ವಸೂಲಿ ಮಾಡಿ) ಬಂದಾಗ, ಅವ…

