'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು
Choose an available translation of this Hadeeth
Hadeeth text
ನವ್ವಾಸ್ ಇಬ್ನ್ ಸಿಮ್ಆನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "'ಬಿರ್' (ಒಳಿತು/ಪುಣ್ಯ) ಎಂದರೆ ಉತ್ತಮ ನಡತೆ. 'ಇಸ್ಮ್' (ಪಾಪ) ಎಂದರೆ ಯಾವುದು ನಿನ್ನ ಮನಸ್ಸಿನಲ್ಲಿ ಸಂಶಯವನ್ನುಂಟುಮಾಡುತ್ತದೆಯೋ (ಅಥವಾ ಚುಚ್ಚುತ್ತದೆಯೋ), ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳುವುದನ್ನು ನೀನು ಇಷ್ಟಪಡುವುದಿಲ್ಲವೋ ಅದು". ವಾಬಿಸಾ ಇಬ್ನ್ ಮಅಬದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದೆನು. ಆಗ ಅವರು ಹೇಳಿದರು: "ನೀನು 'ಬಿರ್' (ಒಳಿತು) ಮತ್ತು 'ಇಸ್ಮ್' (ಪಾಪ) ದ ಬಗ್ಗೆ ಕೇಳಲು ಬಂದಿದ್ದೀಯಾ?" ನಾನು ಹೇಳಿದೆನು: "ಹೌದು". ಅವರು ಹೇಳಿದರು: "ನಿನ್ನ ಹೃದಯದೊಂದಿಗೆ ಫತ್ವಾ ಕೇಳು. 'ಬಿರ್' ಎಂದರೆ ಯಾವುದು ಆತ್ಮಕ್ಕೆ ಸಮಾಧಾನ ನೀಡುತ್ತದೆಯೋ, ಮತ್ತು ಹೃದಯಕ್ಕೆ ನೆಮ್ಮದಿ ನೀಡುತ್ತದೆಯೋ ಅದು. 'ಇಸ್ಮ್' ಎಂದರೆ ಯಾವುದು ನಿನ್ನ ಆತ್ಮದಲ್ಲಿ ಸಂಶಯವನ್ನುಂಟುಮಾಡುತ್ತದೆಯೋ ಮತ್ತು ಎದೆಯಲ್ಲಿ ಹಿಂಜರಿಕೆಯನ್ನುಂಟುಮಾಡುತ್ತದೆಯೋ ಅದು, ಜನರು ನಿನಗೆ ಫತ್ವಾ ನೀಡಿದರೂ ಮತ್ತು (ಅದನ್ನು ಮಾಡಲು) ಫತ್ವಾ ನೀಡಿದರೂ ಸಹ".
Explanation
Benefits
ಸತ್ಯ ಮತ್ತು ಸುಳ್ಳು ಸತ್ಯವಿಶ್ವಾಸಿಗೆ ಗೊಂದಲವನ್ನುಂಟುಮಾಡುವುದಿಲ್ಲ. ಬದಲಿಗೆ ಅವನು ತನ್ನ ಹೃದಯದಲ್ಲಿರುವ ಬೆಳಕಿನಿಂದ ಸತ್ಯವನ್ನು ಅರಿಯುತ್ತಾನೆ, ಮತ್ತು ಸುಳ್ಳಿನಿಂದ ದೂರವಾಗುತ್ತಾನೆ ಹಾಗೂ ಅದನ್ನು ನಿರಾಕರಿಸುತ್ತಾನೆ.
ಹೃದಯದಲ್ಲಿ ಆತಂಕ ಮತ್ತು ಚಡಪಡಿಕೆ ಉಂಟಾಗುವುದು ಮತ್ತು ಜನರು ಅದನ್ನು ತಿಳಿಯಬಾರದೆಂದು ಬಯಸುವುದು ಪಾಪದ ಚಿಹ್ನೆಗಳಲ್ಲಿ ಒಂದಾಗಿದೆ.
ಸನದಿ ಹೇಳಿದರು: "ಇದು (ಹದೀಸಿನಲ್ಲಿ ಹೇಳಲಾದ ಪಾಪ-ಪುಣ್ಯಗಳು) ಜನರು ನಿರ್ದಿಷ್ಟವಾಗಿ ಸರಿಯೋ ತಪ್ಪೋ ಎಂದು ತಿಳಿದಿರದ ಸಂದೇಹಾತ್ಮಕ ವಿಷಯಗಳ ಬಗ್ಗೆಯಾಗಿದೆ. ಇಲ್ಲದಿದ್ದರೆ, ಶರಿಯತ್ನಲ್ಲಿ ಆದೇಶಿಸಲಾದ ಕಾರ್ಯಗಳು ಮತ್ತು ಅವುಗಳಿಗೆ ವಿರುದ್ಧವಾಗಿ ಯಾವುದೇ ಪುರಾವೆಗಳು ಇಲ್ಲದಿದ್ದರೆ, ಅವೆಲ್ಲವೂ ಪುಣ್ಯವಾಗಿವೆ. ಅದೇ ರೀತಿ ಶರಿಯತ್ ನಿಷೇಧಿಸಿದ ಕಾರ್ಯಗಳು ಪಾಪಗಳಾಗಿವೆ. ಇವುಗಳಿಗೆ ಸಂಬಂಧಿಸಿ ಹೃದಯದೊಡನೆ ವಿಧಿ ಕೇಳಬೇಕಾದ ಅಥವಾ ಸಮಾಧಾನ ಉಂಟಾಗುತ್ತದೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ.
ಹದೀಸಿನಲ್ಲಿ ಹೇಳಲಾಗಿರುವುದು ಸ್ವಸ್ಥವಾದ ಸಹಜ ಮನೋಧರ್ಮವನ್ನು ಹೊಂದಿರುವವರ ಬಗ್ಗೆಯಾಗಿದೆಯೇ ವಿನಾ ಸ್ವೇಚ್ಛೆಗೆ ದಾಸರಾಗಿ ತಮ್ಮ ಮನಸ್ಸು ಹೇಳಿದ್ದೇ ಪುಣ್ಯ ಮತ್ತು ತಮ್ಮ ಮನಸ್ಸು ಹೇಳಿದ್ದೇ ಪಾಪ ಎಂದು ನಿರ್ಧರಿಸುವ ಬುಡಮೇಲಾದ ಹೃದಯಗಳಿರುವವರ ಬಗ್ಗೆಯಲ್ಲ."
ತೀಬಿ ಹೇಳಿದರು: "ಹೀಗೆ ಹೇಳಲಾಗುತ್ತದೆ: ಹದೀಸಿನಲ್ಲಿ ಪುಣ್ಯವನ್ನು ವಿವಿಧ ಅರ್ಥಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳಗಳಲ್ಲಿ (ಪುಣ್ಯ ಎಂದರೆ) ಮನಸ್ಸು ಮತ್ತು ಹೃದಯವು ಸಮಾಧಾನ ಪಡೆಯುವ ವಿಷಯವೆಂದು ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳಗಳಲ್ಲಿ ನಂಬಿಕೆಯೆಂದು ವ್ಯಾಖ್ಯಾನಿಸಲಾಗಿದೆ. ಕೆಲವು ಸ್ಥಳದಲ್ಲಿ ಅಲ್ಲಾಹನಿಗೆ ಹತ್ತಿರಗೊಳಿಸುವ ಕಾರ್ಯವೆಂದು ವ್ಯಾಖ್ಯಾನಿಸಲಾಗಿದೆ. ಇಲ್ಲಿ ಅದನ್ನು ಉತ್ತಮ ನಡವಳಿಕೆಯೆಂದು ವ್ಯಾಖ್ಯಾನಿಸಲಾಗಿದೆ. ಉತ್ತಮ ನಡವಳಿಕೆಯನ್ನು ನೋವನ್ನು ಸಹಿಸಿಕೊಳ್ಳುವುದು ಮತ್ತು ಕೋಪ ಕಡಿಮೆ ಮಾಡುವುದು, ಮುಖದಲ್ಲಿ ನಗು ಬೀರುವುದು, ಮಧುರವಾಗಿ ಮಾತನಾಡುವುದು ಎಂದು ವ್ಯಾಖ್ಯಾನಿಸಲಾಗಿದೆ. ಇವೆಲ್ಲವೂ ಹೆಚ್ಚು-ಕಡಿಮೆ ಒಂದು ಅರ್ಥವನ್ನು ಹೊಂದಿವೆ.
Attribution
Categories
Share hadeeth
Sharing options · 0 Total shares

