ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ
Choose an available translation of this Hadeeth
Hadeeth text
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಬಹಳಷ್ಟು ಕೊಲೆಗಳನ್ನು ಮಾಡಿದ ಮತ್ತು ಬಹಳಷ್ಟು ವ್ಯಭಿಚಾರಗಳನ್ನು ಮಾಡಿದ ಕೆಲವು ಬಹುದೇವವಿಶ್ವಾಸಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ನೀವು ಏನು ಹೇಳುತ್ತಿದ್ದೀರೋ ಮತ್ತು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಬಹಳ ಸುಂದರವಾಗಿದೆ. ನಾವು ಮಾಡಿದ ತಪ್ಪುಗಳಿಗೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಸಿ." ಆಗ ಈ ವಚನವು ಅವತೀರ್ಣವಾಯಿತು: "ಯಾರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲವೋ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲವೋ ಮತ್ತು ವ್ಯಭಿಚಾರ ಮಾಡುವುದಿಲ್ಲವೋ." [ಫುರ್ಕಾನ್ 68] ಮತ್ತು ಈ ವಚನ ಅವತೀರ್ಣವಾಯಿತು: "ಹೇಳಿರಿ: ಸ್ವಯಂ ಅತಿರೇಕವೆಸಗಿದ ನನ್ನ ದಾಸರೇ! ಅಲ್ಲಾಹನ ದಯೆಯ ಬಗ್ಗೆ ನಿರಾಶರಾಗಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ." [ಝುಮರ್ 53].
Explanation
ಆಗ ಎರಡು ವಚನಗಳು ಅವತೀರ್ಣವಾದವು. ಅಲ್ಲಾಹು ಜನರಿಂದ, ಅವರ ಪಾಪಗಳ ಹೆಚ್ಚಳ ಮತ್ತು ಗಂಭೀರತೆಯ ಹೊರತಾಗಿಯೂ, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅವನು ಹೀಗೆ ಮಾಡದಿರುತ್ತಿದ್ದರೆ ಅವರು ತಮ್ಮ ಸತ್ಯನಿಷೇಧ ಮತ್ತು ಅತಿರೇಕದಲ್ಲಿ ಮುಂದುವರಿಯುತ್ತಿದ್ದರು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿರಲಿಲ್ಲ.
Benefits
ಅಲ್ಲಾಹನ ಕರುಣೆ ಮತ್ತು ಕ್ಷಮೆಯ ವಿಶಾಲತೆಯನ್ನು ತಿಳಿಸಲಾಗಿದೆ.
ಶಿರ್ಕ್, ಕಾನೂನುಬಾಹಿರ ಹತ್ಯೆ, ವ್ಯಭಿಚಾರವನ್ನು ನಿಷೇಧಿಸಲಾಗಿದೆ ಮತ್ತು ಈ ಪಾಪವೆಸಗುವವರಿಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.
ನಿಷ್ಕಳಂಕತೆ ಮತ್ತು ಸತ್ಕರ್ಮಗಳಿಂದ ಕೂಡಿದ ಪ್ರಾಮಾಣಿಕ ಪಶ್ಚಾತ್ತಾಪವು ಸತ್ಯನಿಷೇಧ ಸೇರಿದಂತೆ ಎಲ್ಲಾ ಮಹಾಪಾಪಗಳನ್ನು ಅಳಿಸುತ್ತದೆ.
ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗುವುದನ್ನು ಮತ್ತು ಹತಾಶೆ ವ್ಯಕ್ತಪಡಿಸುವುದನ್ನು ನಿಷೇಧಿಸಲಾಗಿದೆ.
Attribution
Categories
Share hadeeth
Sharing options · 0 Total shares

