ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ
Choose an available translation of this Hadeeth
Hadeeth text
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ."
Explanation
Benefits
ಮುಸಲ್ಮಾನನನ್ನು ಅನ್ಯಾಯವಾಗಿ ನಿಂದಿಸುವವನ ಸ್ಥಿತಿಯು ಭಯಾನಕವಾಗಿದೆ. ಅನ್ಯಾಯವಾಗಿ ನಿಂದಿಸುವವನು ಫಾಸಿಕ್ (ಅವಿಧೇಯ) ಆಗುತ್ತಾನೆ.
ಮುಸಲ್ಮಾನನನ್ನು ನಿಂದಿಸುವುದು ಮತ್ತು ಅವನೊಡನೆ ಹೋರಾಡುವುದು ಸತ್ಯವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಮತ್ತು ಕುಂಠಿತಗೊಳಿಸುತ್ತದೆ.
ಕೆಲವು ಕರ್ಮಗಳು ಇಸ್ಲಾಂ ಧರ್ಮದಿಂದ ಹೊರಹೋಗುವಂತಹ ರೀತಿಯಲ್ಲಿರುವ ದೊಡ್ಡ ಸತ್ಯನಿಷೇಧಕ್ಕೆ (ಕುಫ್ರ್ ಅಕ್ಬರ್) ತಲುಪದಿದ್ದರೂ ಅವುಗಳನ್ನು ಸತ್ಯನಿಷೇಧ (ಕುಫ್ರ್) ಎಂದು ಕರೆಯಲಾಗಿದೆ.
ಇಲ್ಲಿ ಹೇಳಿರುವ ಸತ್ಯನಿಷೇಧ (ಕುಫ್ರ್) ಸಣ್ಣ ಸತ್ಯನಿಷೇಧವಾಗಿದೆ. ಅಹ್ಲುಸ್ಸುನ್ನದ ವಿದ್ವಾಂಸರ ಒಮ್ಮತಾಭಿಪ್ರಾಯದ ಪ್ರಕಾರ ಇದನ್ನು ಮಾಡಿದವರು ಇಸ್ಲಾಂ ಧರ್ಮದಿಂದ ಹೊರಹೋಗುವುದಿಲ್ಲ. ಏಕೆಂದರೆ, ಸತ್ಯವಿಶ್ವಾಸಿಗಳು ಪರಸ್ಪರ ಹೋರಾಡಿದರೂ, ಜಗಳವಾಡಿದರೂ ಅಲ್ಲಾಹು ಅವರನ್ನು ಸತ್ಯವಿಶ್ವಾಸಿಗಳೆಂದು ಕರೆದಿದ್ದಾನೆ. ಅಲ್ಲಾಹು ಹೇಳುತ್ತಾನೆ: "ಸತ್ಯವಿಶ್ವಾಸಿಗಳಲ್ಲಿ ಸೇರಿದ ಎರಡು ಬಣಗಳು ಪರಸ್ಪರ ಹೋರಾಡಿದರೆ ಅವರ ಮಧ್ಯೆ ಸಂಧಾನ ಮಾಡಿರಿ." ಎಂಬಲ್ಲಿಂದ "ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಸಹೋದರರಾಗಿದ್ದಾರೆ." ಎಂಬಲ್ಲಿಯ ತನಕ.
Attribution
Categories
Share hadeeth
Sharing options · 0 Total shares

