“ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದರೆ ಗುಮಾನಿಯು ಅತಿದೊಡ್ಡ ಸುಳ್ಳು ಮಾತಾಗಿದೆ
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದರೆ ಗುಮಾನಿಯು ಅತಿದೊಡ್ಡ ಸುಳ್ಳು ಮಾತಾಗಿದೆ. ನೀವು ಒಬ್ಬರನ್ನೊಬ್ಬರು ಬೇಹುಗಾರಿಕೆ ಮಾಡಬೇಡಿ, ಒಬ್ಬರು ಇನ್ನೊಬ್ಬರ ಖಾಸಗಿ ವಿಚಾರಗಳನ್ನು ಕೆದಕಬೇಡಿ, ಒಬ್ಬರನ್ನೊಬ್ಬರು ಅಸೂಯೆ ಪಡಬೇಡಿ, ಒಬ್ಬರಿಗೊಬ್ಬರು ಮುಖ ತಿರುಗಿಸಬೇಡಿ, ಒಬ್ಬರನ್ನೊಬ್ಬರು ದ್ವೇಷಿಸಬೇಡಿ. ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ."
Explanation
ಗುಮಾನಿ: ಅಂದರೆ ಯಾವುದೇ ಆಧಾರವಿಲ್ಲದೆ ಹೃದಯಗಳಲ್ಲಿ ಮೂಡುವ ಕೆಲವು ಆರೋಪಗಳಾಗಿವೆ. ಅವು ಅತಿದೊಡ್ಡ ಸುಳ್ಳು ಮಾತುಗಳಾಗಿವೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸಿದ್ದಾರೆ.
ಬೇಹುಗಾರಿಕೆ: ಅಂದರೆ ಕಣ್ಣು ಮತ್ತು ಕಿವಿಗಳ ಮೂಲಕ ಜನರ ಖಾಸಗಿ ವಿಷಯಗಳನ್ನು ತನಿಖೆ ಮಾಡುವುದು.
ಕೆದಕುವುದು: ಅಂದರೆ ಅತ್ಯಂತ ಸೂಕ್ಷ್ಮ ವಿಷಯಗಳನ್ನು ಅನ್ವೇಷಿಸಿ ತಿಳಿಯುವುದು. ಇದು ಹೆಚ್ಚಾಗಿ ಕೆಟ್ಟ ಉದ್ದೇಶಗಳಿಗೆ ಬಳಕೆಯಾಗುತ್ತದೆ.
ಅಸೂಯೆ: ಅಂದರೆ ಇತರರಿಗೆ ಒಳಿತುಂಟಾಗುವುದನ್ನು ದ್ವೇಷಿಸುವುದು.
ಒಬ್ಬರಿಗೊಬ್ಬರು ಮುಖ ತಿರುಗಿಸುವುದು: ಅಂದರೆ ಒಬ್ಬರು ಇನ್ನೊಬ್ಬರನ್ನು ಕಡೆಗಣಿಸುವುದು, ಸಲಾಂ ಹೇಳದಿರುವುದು ಮತ್ತು ಮುಸ್ಲಿಂ ಸಹೋದರರನ್ನು ಭೇಟಿಯಾಗದಿರುವುದು.
ಒಬ್ಬರನ್ನೊಬ್ಬರು ದ್ವೇಷಿಸುವುದು: ಅಂದರೆ ಇಷ್ಟಪಡದಿರುವುದು ಮತ್ತು ಅಸಹ್ಯಪಡುವುದು. ಉದಾಹರಣೆಗೆ, ಇತರರಿಗೆ ತೊಂದರೆ ಕೊಡುವುದು, ಮುಖ ಸಿಂಡರಿಸುವುದು ಮತ್ತು ಕೆಟ್ಟದಾಗಿ ವರ್ತಿಸುವುದು.
ನಂತರ ಮುಸಲ್ಮಾನರು ಪರಸ್ಪರ ತಮ್ಮ ಸಂಬಂಧಗಳನ್ನು ಸುಧಾರಿಸಬಹುದಾದ ಸಮಗ್ರ ಆಜ್ಞೆಯನ್ನು ನೀಡುತ್ತಾ ಅವರು ಹೇಳುತ್ತಾರೆ: "ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ." ಸಹೋದರತ್ವವೆಂದರೆ, ಜನರ ನಡುವಿನ ಸಂಬಂಧಗಳನ್ನು ಸರಿಪಡಿಸುವ ಕೊಂಡಿಯಾಗಿದ್ದು, ಅದು ಅವರ ನಡುವೆ ಪ್ರೀತಿ-ವಾತ್ಸಲ್ಯವನ್ನು ಹೆಚ್ಚಿಸುತ್ತದೆ.
Benefits
ಇಲ್ಲಿ ಎಚ್ಚರಿಕೆ ನೀಡಲಾಗಿರುವುದು ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ಮತ್ತು ಆಳವಾಗಿ ಬೇರೂರುವ ಗುಮಾನಿಗಳ ಬಗ್ಗೆಯಾಗಿದೆ. ಮನಸ್ಸಿನಲ್ಲಿ ಬಂದು ಹೋಗುವ ಆಲೋಚನೆಗಳು ಪ್ರಶ್ನಾರ್ಹವಲ್ಲ.
ಬೇಹುಗಾರಿಕೆ, ಅಸೂಯೆ ಮುಂತಾದ ಮುಸ್ಲಿಮ್ ಸಮುದಾಯದಲ್ಲಿ ದ್ವೇಷ ಮತ್ತು ಒಡಕಿಗೆ ಕಾರಣವಾಗುವ ಪ್ರವೃತ್ತಿಗಳನ್ನು ನಿಷೇಧಿಸಲಾಗಿದೆ.
ಹಿತಚಿಂತನೆ ಮತ್ತು ಪ್ರೀತಿಯ ಮೂಲಕ ಸಹ ಮುಸ್ಲಿಮರೊಡನೆ ಸಹೋದರರಂತೆ ವರ್ತಿಸಲು ಉಪದೇಶಿಸಲಾಗಿದೆ.
Attribution
Categories
Share hadeeth
Sharing options · 0 Total shares

