افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#3075[صحيح]
HadeethEnc · 1.36.0

ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು

Available translations

Choose an available translation of this Hadeeth

01

Hadeeth text

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ, ಅವರು ಅಲ್ಲಿನ ಜನಸಮೂಹದ ತಿಪ್ಪೆಯ ಬಳಿಗೆ ಸಾಗಿ, ಅಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು. ನಾನು ಅವರಿಂದ ದೂರ ಸರಿದೆ. ಅವರು ಹೇಳಿದರು: "ಹತ್ತಿರ ಬಾ." ನಾನು ಅವರ ಹಿಂಭಾಗದಲ್ಲಿ ಅವರಿಗೆ ಹತ್ತಿರವಾಗಿ ನಿಂತೆ. ನಂತರ ಅವರು ವುದೂ ನಿರ್ವಹಿಸಿದರು ಮತ್ತು ಪಾದರಕ್ಷೆಗಳ ಮೇಲೆ ಸವರಿದರು.
02

Explanation

ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಒಮ್ಮೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂತ್ರ ವಿಸರ್ಜನೆ ಮಾಡಲು ಒಂದು ಜನಸಮೂಹದ ತಿಪ್ಪೆಯ ಬಳಿಗೆ ಹೋದರು. ಅದು ಮನೆಗಳನ್ನು ಗುಡಿಸಿ ತೆಗೆದ ಕಸ-ಕಡ್ಡಿಗಳನ್ನು ಮತ್ತು ಧೂಳಿಯನ್ನು ಎಸೆಯುವ ಸ್ಥಳವಾಗಿದೆ. ಅಲ್ಲಿ ಅವರು ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರು. ಹೆಚ್ಚಿನ ಸಂದರ್ಭಗಳಲ್ಲಿ ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುವುದು ಅವರ ಅಭ್ಯಾಸವಾಗಿತ್ತು.

ಆಗ ಹುದೈಫ ಅವರಿಂದ ದೂರ ಸರಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹತ್ತಿರ ಬಾ. ಹುದೈಫ ಅವರ ಪಾದಗಳ ಹಿಂಬದಿಯಲ್ಲಿ ಅವರಿಗೆ ಹತ್ತಿರವಾಗಿ ನಿಂತರು. ಇದು ಆ ಪರಿಸ್ಥಿತಿಯಲ್ಲಿ ಅವರನ್ನು ಯಾರೂ ನೋಡದಿರಲಿ ಎಂದು ಅವರನ್ನು ಪರದೆಯಂತೆ ಮರೆಮಾಚುವುದಕ್ಕಾಗಿತ್ತು.

ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದರು. ಕಾಲುಗಳನ್ನು ತೊಳೆಯುವ ಸಂದರ್ಭ ಬಂದಾಗ, ಅವರು ತಮ್ಮ ಖುಫ್ಫ್‌ಗಳನ್ನು—ಇವು ಪುರುಷರು ತಮ್ಮ ಕಾಲಿಗೆ ಧರಿಸುವ ತೆಳುವಾದ ಚರ್ಮ ಮುಂತಾದವುಗಳಿಂದ ತಯಾರಿಸಲಾದ ಪಾದರಕ್ಷೆಗಳಾಗಿದ್ದು ಇವು ಅವರ ಹರಡುಗಂಟುಗಳು ಸೇರಿದಂತೆ ಪಾದಗಳನ್ನು ಸಂಪೂರ್ಣವಾಗಿ ಮುಚ್ಚುತ್ತದೆ—ಕಳಚದೆ ಅವುಗಳ ಮೇಲೆ ಸವರಿದರು.
03

Benefits

ಪಾದರಕ್ಷೆಗಳ ಮೇಲೆ ಸವರುವುದು ಶಾಸ್ತ್ರೋಕ್ತವಾಗಿದೆ.
ಮೂತ್ರದ ಹನಿಗಳು ಮೈಗೆ ತಾಗುವುದಿಲ್ಲ ಎಂದು ಖಾತ್ರಿಯಿದ್ದರೆ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುವುದಕ್ಕೆ ಅನುಮತಿಯಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂತ್ರ ವಿಸರ್ಜನೆ ಮಾಡಲು ತಿಪ್ಪೆಯನ್ನು ಆರಿಸಿಕೊಂಡರು. ಅದು ಕಸ ಮತ್ತು ಕೊಳಕು ವಸ್ತುಗಳನ್ನು ಎಸೆಯುವ ಸ್ಥಳವಾಗಿದೆ. ಏಕೆಂದರೆ, ಅಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸುಲಭವಾಗಿದೆ. ಮೂತ್ರವು ವಿಸರ್ಜಿಸುವವನ ಮೇಲೆ ಅಪ್ಪಳಿಸುವುದಿಲ್ಲ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...