ಯಾವುದೇ ಮನುಷ್ಯನು ಇನ್ನೊಬ್ಬನನ್ನು ಫಾಸಿಕ್ (ದುಷ್ಕರ್ಮಿ) ಎಂದು ಆರೋಪಿಸಬಾರದು, ಅಥವಾ ಸತ್ಯನಿಷೇಧಿಯೆಂದು ಆರೋಪಿಸಬಾರದು. ಏಕೆಂದರೆ, ಆ ವ್ಯಕ್ತಿ ಅವನು ಹೇಳಿದಂತೆ ಇಲ್ಲದಿದ್ದರೆ, ಅದು ಹೇಳಿದವನಿಗೆ ಮರಳುತ್ತದೆ
Choose an available translation of this Hadeeth
Hadeeth text
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾವುದೇ ಮನುಷ್ಯನು ಇನ್ನೊಬ್ಬನನ್ನು ಫಾಸಿಕ್ (ದುಷ್ಕರ್ಮಿ) ಎಂದು ಆರೋಪಿಸಬಾರದು, ಅಥವಾ ಸತ್ಯನಿಷೇಧಿಯೆಂದು ಆರೋಪಿಸಬಾರದು. ಏಕೆಂದರೆ, ಆ ವ್ಯಕ್ತಿ ಅವನು ಹೇಳಿದಂತೆ ಇಲ್ಲದಿದ್ದರೆ, ಅದು ಹೇಳಿದವನಿಗೆ ಮರಳುತ್ತದೆ."
Explanation
Benefits
ಜನರ ಬಗ್ಗೆ ತೀರ್ಪು ನೀಡುವ ಮೊದಲು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇಬ್ನ್ ದಕೀಕುಲ್ ಈದ್ ಹೇಳಿದರು: "ಒಬ್ಬ ಮುಸಲ್ಮಾನನ್ನು ಸತ್ಯನಿಷೇಧಿ ಎಂದು ಅನ್ಯಾಯವಾಗಿ ಘೋಷಿಸುವವರಿಗೆ, ಇದು ಗಂಭೀರ ಎಚ್ಚರಿಕೆಯಾಗಿದೆ. ಇದು ಆರೋಪದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ."
ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಆದರೆ, ಒಬ್ಬನನ್ನು ನೀನು ದುಷ್ಕರ್ಮಿ ಎಂದು ಆರೋಪಿಸುವುದರಿಂದ ಅವನು ದುಷ್ಕರ್ಮಿ ಅಥವಾ ಸತ್ಯನಿಷೇಧಿಯಾಗುವುದಿಲ್ಲ ಎಂಬುದು ಅವನು ಒಂದು ದೃಷ್ಟಿಯಿಂದ ಪಾಪಿಯಾಗುವುದಿಲ್ಲ ಎಂದರ್ಥವಲ್ಲ. ಬದಲಿಗೆ ಈ ವಿಷಯವನ್ನು ವಿವರಿಸಬೇಕಾಗುತ್ತದೆ: ಒಬ್ಬ ವ್ಯಕ್ತಿಯ ತಪ್ಪುಗಳನ್ನು ತಿಳಿಸಿಕೊಟ್ಟು ಅವನಿಗೆ ಅಥವಾ ಇತರರಿಗೆ ಬುದ್ಧಿವಾದ ಹೇಳುವುದಾದರೆ ಅದಕ್ಕೆ ಅನುಮತಿಯಿದೆ. ಆದರೆ ಒಬ್ಬ ವ್ಯಕ್ತಿಯನ್ನು ಅವಮಾನಿಸಲು, ಅವನ ತಪ್ಪನ್ನು ಬಹಿರಂಗಗೊಳಿಸಲು ಮತ್ತು ಅವನಿಗೆ ತೊಂದರೆ ನೀಡುವುದನ್ನು ಮಾತ್ರ ಉದ್ದೇಶಿಸಿದ್ದರೆ, ಅದಕ್ಕೆ ಅನುಮತಿಯಿಲ್ಲ. ಏಕೆಂದರೆ ಬುದ್ಧಿವಾದ ಹೇಳುವಾಗ, ದೋಷಗಳನ್ನು (ಇತರರಿಗೆ ತಿಳಿಯದಂತೆ) ಮರೆಮಾಚಬೇಕು, ತಿಳುವಳಿಕೆ ನೀಡಬೇಕು ಮತ್ತು ಉತ್ತಮ ಉಪದೇಶ ನೀಡಬೇಕು. ಮೃದುವಾಗಿ ಅದನ್ನು ಮಾಡಲು ಸಾಧ್ಯವಿದ್ದರೆ ಹಿಂಸಾತ್ಮಕವಾಗಿ ಅದನ್ನು ಮಾಡಬಾರದು. ಏಕೆಂದರೆ ಅದು ತಪ್ಪಾದ ಕೆಲಸದಲ್ಲಿ ಮುಂದುವರಿಯಲು ಮತ್ತು ಪಟ್ಟುಹಿಡಿಯಲು ಕಾರಣವಾಗಬಹುದು. ಜನರಲ್ಲಿ ಹೆಚ್ಚಿನವರ ಸ್ವಭಾವದಲ್ಲಿ ಈ ಅಂಶವನ್ನು ಕಾಣಬಹುದು. ವಿಶೇಷವಾಗಿ ಬುದ್ಧಿವಾದ ಹೇಳುವವನು ಬುದ್ಧಿವಾದ ಸ್ವೀಕರಿಸುವವನಿಗಿಂತ ಕೆಳಗಿನ ಸ್ಥಾನದಲ್ಲಿದ್ದರೆ.
Attribution
Categories
Share hadeeth
Sharing options · 0 Total shares

