افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#66304[صحيح]
HadeethEnc · 1.36.0

ನಾನು ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನನ್ನ ದೃಷ್ಟಿಯನ್ನು ಮೇಲಕ್ಕೆತ್ತಿದೆನು. ಆಗ, ಹಿರಾ ಗುಹೆಯಲ್ಲಿ ನನ್ನ ಬಳಿಗೆ ಬಂದಿದ್ದ ಅದೇ ಮಲಕ್ (ದೇವದೂತ ಜಿಬ್ರೀಲ್),

Available translations

Choose an available translation of this Hadeeth

01

Hadeeth text

ಅಬೂ ಸಲಾಮ ಇಬ್ನ್ ಅಬ್ದುರ್ರಹ್ಮಾನ್ ರಿಂದ ವರದಿ: ಜಾಬಿರ್ ಇಬ್ನ್ ಅಬ್ದುಲ್ಲಾ ಅಲ್-ಅನ್ಸಾರಿ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು 'ವಹೀ' (ದಿವ್ಯವಾಣಿ) ಸ್ಥಗಿತಗೊಂಡಿದ್ದ ಅವಧಿಯ ಬಗ್ಗೆ ಮಾತನಾಡುತ್ತಾ, ತಮ್ಮ ಹದೀಸ್‌ನಲ್ಲಿ ಹೀಗೆ ಹೇಳಿದರು: "ನಾನು ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನನ್ನ ದೃಷ್ಟಿಯನ್ನು ಮೇಲಕ್ಕೆತ್ತಿದೆನು. ಆಗ, ಹಿರಾ ಗುಹೆಯಲ್ಲಿ ನನ್ನ ಬಳಿಗೆ ಬಂದಿದ್ದ ಅದೇ ಮಲಕ್ (ದೇವದೂತ ಜಿಬ್ರೀಲ್), ಆಕಾಶ ಮತ್ತು ಭೂಮಿಯ ನಡುವೆ ಕುರ್ಸಿಯ (ಆಸನದ) ಮೇಲೆ ಕುಳಿತಿದ್ದರು. ಅವರನ್ನು ಕಂಡು ನಾನು ಭಯಭೀತನಾದೆನು. ನಾನು (ಮನೆಗೆ) ಮರಳಿ, 'ನನ್ನನ್ನು ಹೊದಿಸಿರಿ' ಎಂದು ಹೇಳಿದೆನು. ಆಗ ಅಲ್ಲಾಹು: “ಓ ಹೊದ್ದುಕೊಂಡಿರುವವನೇ! ಎದ್ದೇಳು ಮತ್ತು ಎಚ್ಚರಿಕೆ ನೀಡು” [ಅಲ್-ಮುದ್ದಸ್ಸಿರ್: 1-2] ರಿಂದ ಹಿಡಿದು “ಮತ್ತು ಮಾಲಿನ್ಯವನ್ನು ತ್ಯಜಿಸು” [ಅಲ್-ಮುದ್ದಸ್ಸಿರ್: 5] ರವರೆಗಿನ ವಚನಗಳನ್ನು ಅವತೀರ್ಣಗೊಳಿಸಿದನು. ನಂತರ 'ವಹೀ' (ದಿವ್ಯವಾಣಿ) ತೀವ್ರವಾಯಿತು ಮತ್ತು ನಿರಂತರವಾಗಿ ಬರಲಾರಂಭಿಸಿತು."
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಪ್ರವಾದಿತ್ವದ ಆರಂಭದಲ್ಲಿ 'ವಹೀ' (ದಿವ್ಯವಾಣಿ) ಬರುವುದು ಸ್ಥಗಿತಗೊಂಡಿದ್ದ ಮತ್ತು ತಡವಾಗಿದ್ದ ಅವಧಿಯ ಬಗ್ಗೆ ವಿವರಿಸುತ್ತಾ ಹೀಗೆ ಹೇಳಿದರು: ನಾನು ಮಕ್ಕಾದ ದಾರಿಗಳಲ್ಲಿ ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನನ್ನ ದೃಷ್ಟಿಯನ್ನು ಮೇಲಕ್ಕೆತ್ತಿದೆನು. ಆಗ, ಹಿರಾ ಗುಹೆಯಲ್ಲಿ ನನ್ನ ಬಳಿಗೆ ಬಂದಿದ್ದ ದೇವದೂತ ಜಿಬ್ರೀಲ್, ಆಕಾಶ ಮತ್ತು ಭೂಮಿಯ ನಡುವೆ ಆಸನದ ಮೇಲೆ ಕುಳಿತಿದ್ದರು. ಅವರನ್ನು ಕಂಡು ನಾನು ಭಯಭೀತನಾದೆನು ಮತ್ತು ಗಾಬರಿಗೊಂಡೆನು. ನಾನು ನನ್ನ ಕುಟುಂಬದವರ ಬಳಿಗೆ ಮರಳಿ, "ನನ್ನನ್ನು ಬಟ್ಟೆಯಿಂದ ಹೊದಿಸಿರಿ" ಎಂದು ಹೇಳಿದೆನು. ಆಗ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಯಾ ಅಯ್ಯುಹಲ್ ಮುದ್ದಸ್ಸಿರ್” (ಓ ಹೊದ್ದುಕೊಂಡಿರುವವನೇ): ಅಂದರೆ ಬಟ್ಟೆಯನ್ನು ಸುತ್ತಿಕೊಂಡಿರುವವನೇ. “ಕುಮ್” (ಎದ್ದೇಳು): ಅಂದರೆ ಧರ್ಮದ ಕರೆಯೊಂದಿಗೆ ಎದ್ದೇಳು. “ಫ ಅನ್‌ಝಿರ್” (ಎಚ್ಚರಿಕೆ ನೀಡು): ಅಂದರೆ ನಿನ್ನ ಸಂದೇಶದಲ್ಲಿ ವಿಶ್ವಾಸವಿಡದವರಿಗೆ ಎಚ್ಚರಿಕೆ ನೀಡು. “ವ ರಬ್ಬಕ ಫ ಕಬ್ಬಿರ್” (ಮತ್ತು ನಿನ್ನ ರಬ್ಬ್‌ನನ್ನು (ಅಲ್ಲಾಹನನ್ನು) ಮಹಾನನೆಂದು ಘೋಷಿಸು): ಅಂದರೆ ನಿನ್ನ ಆರಾಧನೆಗೆ ಅರ್ಹನಾದವನು ಯಾರೋ ಅವನನ್ನು ಸ್ತುತಿಸು ಮತ್ತು ಘನವೆತ್ತವನೆಂದು ಸಾರು. “ವ ಸಿಯಾಬಕ ಫ ತಹ್ಹಿರ್” (ಮತ್ತು ನಿನ್ನ ಬಟ್ಟೆಗಳನ್ನು ಶುದ್ಧವಾಗಿರಿಸು): ಅಂದರೆ ಅವುಗಳನ್ನು ಕಲ್ಮಶಗಳಿಂದ ಮುಕ್ತವಾಗಿರಿಸು. “ವ ರ್ರುಜ್‍‌ಝ ಫಹ್ಜುರ್” (ಮತ್ತು ಮಾಲಿನ್ಯವನ್ನು ತ್ಯಜಿಸು): ಅಂದರೆ ವಿಗ್ರಹಗಳು ಮತ್ತು ಪ್ರತಿಮೆಗಳ ಆರಾಧನೆಯನ್ನು ಬಿಟ್ಟುಬಿಡು. ಇದರ ನಂತರ 'ವಹೀ' ಬಲವಾಯಿತು ಮತ್ತು ಹೆಚ್ಚಾಯಿತು.
03

Benefits

“ಇಕ್ ರಅ್” (ಓದು) ಎಂಬ ವಚನ ಅವತೀರ್ಣವಾದ ನಂತರ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವಲ್ಪ ಕಾಲ 'ವಹೀ' ಬರುವುದು ನಿಂತಿತ್ತು (ಅದು ನಂತರ ಮುಂದುವರಿಯಿತು).
ಮನುಷ್ಯನಿಗೆ ಎದುರಾದ ಕಷ್ಟಗಳು ದೂರವಾದ ನಂತರ, ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಆ ಕಷ್ಟಗಳ ಬಗ್ಗೆ ಹೇಳಿಕೊಳ್ಳುವುದು ಸಮ್ಮತಾರ್ಹವಾಗಿದೆ.
“ಇಕ್ ರಅ್ ಬಿಸ್ಮಿ ರಬ್ಬಿಕಲ್ಲದೀ ಖಲಕ್” ಇಳಿದ ಅವತೀರ್ಣವಾದ, “ಯಾ ಅಯ್ಯುಹಲ್ ಮುದ್ದಸ್ಸಿರ್” ಎಂಬ ವಚನವು (ಎರಡನೇ ಹಂತದಲ್ಲಿ) ಮೊದಲಿಗೆ ಅವತೀರ್ಣವಾಯಿತು.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಅಲ್ಲಾಹನ ಶ್ರೇಷ್ಠ ಅನುಗ್ರಹವಿದೆ; ಅವನು ಪ್ರವಾದಿಯವರು ಇಹಲೋಕ ತ್ಯಜಿಸುವವರೆಗೂ ತಡೆಯಿಲ್ಲದೆ ಅವರಿಗೆ ದಿವ್ಯವಾಣಿಯನ್ನು ಅವತೀರ್ಣಗೊಳಿಸಿದನು.
ಅಲ್ಲಾಹನ ಕಡೆಗೆ ಆಹ್ವಾನಿಸುವುದು (ಧರ್ಮಪ್ರಚಾರ ಮಾಡುವುದು), (ಸತ್ಯದಿಂದ) ಮುಖ ತಿರುಗಿಸಿಕೊಂಡವರಿಗೆ ಎಚ್ಚರಿಕೆ ನೀಡುವುದು ಮತ್ತು (ಸತ್ಯಕ್ಕೆ) ವಿಧೇಯರಾದವರಿಗೆ ಸುವಾರ್ತೆ ತಿಳಿಸುವುದು ಕಡ್ಡಾಯವಾಗಿದೆ.
ನಮಾಝ್‌ಗಾಗಿ ಬಟ್ಟೆಗಳನ್ನು ಶುದ್ಧೀಕರಿಸುವುದು ಕಡ್ಡಾಯವಾಗಿದೆ. “ನಿನ್ನ ಬಟ್ಟೆಗಳನ್ನು ಶುದ್ಧವಾಗಿರಿಸು” ಎಂಬ ವಚನವನ್ನು ಇದಕ್ಕೆ ಆಧಾರವಾಗಿ ನೀಡಲಾಗಿದೆ.
ಮಲಕ್ ಗಳಲ್ಲಿ (ದೇವದೂತರಲ್ಲಿ) ಮತ್ತು ಅಲ್ಲಾಹು ಅವರಿಗೆ ನೀಡಿದ ಕೆಲಸಗಳಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...