HadeethEnc · 1.36.0
“ಸತ್ಯವಿಶ್ವಾಸಿಯು, ಎಲ್ಲಿಯವರೆಗೆ ನಿಷಿದ್ಧವಾದ ರಕ್ತವನ್ನು ಹರಿಸುವುದಿಲ್ಲವೋ (ಅನ್ಯಾಯವಾಗಿ ಕೊಲೆ ಮಾಡುವುದಿಲ್ಲವೋ), ಅಲ್ಲಿಯವರೆಗೆ ಅವನು ತನ್ನ ಧರ್ಮದಲ್ಲಿ ವಿಶಾಲತೆಯಲ್ಲಿಯೇ ಇರುತ್ತಾನೆ”
Available translations
Choose an available translation of this Hadeeth
01
Hadeeth text
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸತ್ಯವಿಶ್ವಾಸಿಯು, ಎಲ್ಲಿಯವರೆಗೆ ನಿಷಿದ್ಧವಾದ ರಕ್ತವನ್ನು ಹರಿಸುವುದಿಲ್ಲವೋ (ಅನ್ಯಾಯವಾಗಿ ಕೊಲೆ ಮಾಡುವುದಿಲ್ಲವೋ), ಅಲ್ಲಿಯವರೆಗೆ ಅವನು ತನ್ನ ಧರ್ಮದಲ್ಲಿ ವಿಶಾಲತೆಯಲ್ಲಿಯೇ ಇರುತ್ತಾನೆ”.
02
Explanation
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಯು ಸದಾ ತನ್ನ ಸತ್ಕರ್ಮಗಳ ವಿಶಾಲತೆಯಲ್ಲಿ ಮತ್ತು ಅಲ್ಲಾಹನ ಕರುಣೆ, ಕ್ಷಮೆ ಹಾಗೂ ಮನ್ನಣೆಯ ನಿರೀಕ್ಷೆಯಲ್ಲಿರುತ್ತಾನೆ. ಆದರೆ, ಯಾವಾಗ ಅವನು ಕೊಲ್ಲಲು ನಿಷೇಧಿಸಲ್ಪಟ್ಟ ಮನುಷ್ಯನನ್ನು (ಅಂದರೆ ಯಾರನ್ನಾದರೂ ಅನ್ಯಾಯವಾಗಿ) ಕೊಲ್ಲುತ್ತಾನೋ, ಆಗ ಅವನ ಕರ್ಮಗಳು ಅವನ ಪಾಲಿಗೆ ಕಿರಿದಾಗುತ್ತವೆ. ಏಕೆಂದರೆ ಆ ಕರ್ಮಗಳು ಕೊಲೆಯ ಪಾಪ ಮತ್ತು ಅದರ ಗಂಭೀರ ಅಪರಾಧವನ್ನು ಸರಿದೂಗಿಸಲು ಸಾಕಾಗುವುದಿಲ್ಲ.
03
Benefits
ಅನ್ಯಾಯವಾಗಿ ಕೊಲ್ಲುವುದು ಮತ್ತು ಉದ್ದೇಶಪೂರ್ವಕವಾಗಿ ಕೊಲ್ಲುವುದು ಎಷ್ಟು ಗಂಭೀರವಾಗಿದೆ ಎಂದರೆ, ಅದು ಸತ್ಯವಿಶ್ವಾಸಿಯನ್ನು ಧರ್ಮದ ವಿಶಾಲತೆಯಿಂದ ಇಕ್ಕಟ್ಟಿಗೆ ತಳ್ಳುತ್ತದೆ.
ನಿಷಿದ್ಧವಾದ ಕೊಲೆಗಳು ನಾಲ್ಕು ವಿಧಗಳಾಗಿವೆ: 1. ಮುಸ್ಲಿಮರನ್ನು ಕೊಲ್ಲುವುದು: ಇದು ಅವುಗಳಲ್ಲಿ ಅತ್ಯಂತ ಗಂಭೀರವಾದುದು. 2. ‘ಧಿಮ್ಮಿ’ಗಳನ್ನು ಕೊಲ್ಲುವುದು: ದಿಮ್ಮಿಗಳು ಎಂದರೆ ಇಸ್ಲಾಮೀ ರಾಜ್ಯದಲ್ಲಿ ತೆರಿಗೆ ನೀಡುವ ಮತ್ತು ಇಸ್ಲಾಮೀ ತೀರ್ಪುಗಳಿಗೆ ಬದ್ಧರಾಗುವ ಷರತ್ತಿನೊಂದಿಗೆ ತಮ್ಮ ಧರ್ಮದಲ್ಲಿಯೇ ಉಳಿದುಕೊಂಡಿರುವ ಯಹೂದಿಗಳು ಮತ್ತು ಕ್ರೈಸ್ತರು. 3. ಕರಾರಿನಲ್ಲಿರುವವರನ್ನು ಕೊಲ್ಲುವುದು: ಇವರು ಮುಸ್ಲಿಮೇತರ ದೇಶದಲ್ಲಿರುವ ಸತ್ಯನಿಷೇಧಿಗಳಾಗಿದ್ದು, ಮುಸ್ಲಿಮರ ಮತ್ತು ಅವರ ನಡುವೆ ಶಾಂತಿ ಒಪ್ಪಂದವಿರುತ್ತದೆ. ಮುಸ್ಲಿಮರು ಅವರೊಂದಿಗೆ ಯುದ್ಧ ಮಾಡುವುದಿಲ್ಲ ಮತ್ತು ಅವರು ಮುಸ್ಲಿಮರೊಂದಿಗೆ ಯುದ್ಧ ಮಾಡುವುದಿಲ್ಲ. 4. ಸುರಕ್ಷತೆ ನೀಡಲಾದವರನ್ನು ಕೊಲ್ಲುವುದು: ಇವರು ಮುಸ್ಲಿಮರೊಂದಿಗೆ ಯುದ್ಧದಲ್ಲಿರುವ ಮುಸ್ಲಿಮೇತರ ದೇಶಗಳ ಸತ್ಯನಿಷೇಧಿಗಳಾಗಿದ್ದು, ಮುಸ್ಲಿಮರ ಮತ್ತು ಅವರ ನಡುವೆ ಯಾವುದೇ ಶಾಶ್ವತ ರಕ್ಷಣೆ ಅಥವಾ ಒಪ್ಪಂದವಿರುವುದಿಲ್ಲ, ಆದರೆ ಮುಸ್ಲಿಮರು (ಅಥವಾ ಮುಸ್ಲಿಮ್ ಆಡಳಿತಗಾರರು) ಅವರಿಗೆ ಮುಸ್ಲಿಂ ದೇಶವನ್ನು ಪ್ರವೇಶಿಸಲು ನಿಗದಿತ ಸಮಯದವರೆಗೆ ಸುರಕ್ಷತೆ ನೀಡಿರುತ್ತಾರೆ.
ನಿಷಿದ್ಧವಾದ ಕೊಲೆಗಳು ನಾಲ್ಕು ವಿಧಗಳಾಗಿವೆ: 1. ಮುಸ್ಲಿಮರನ್ನು ಕೊಲ್ಲುವುದು: ಇದು ಅವುಗಳಲ್ಲಿ ಅತ್ಯಂತ ಗಂಭೀರವಾದುದು. 2. ‘ಧಿಮ್ಮಿ’ಗಳನ್ನು ಕೊಲ್ಲುವುದು: ದಿಮ್ಮಿಗಳು ಎಂದರೆ ಇಸ್ಲಾಮೀ ರಾಜ್ಯದಲ್ಲಿ ತೆರಿಗೆ ನೀಡುವ ಮತ್ತು ಇಸ್ಲಾಮೀ ತೀರ್ಪುಗಳಿಗೆ ಬದ್ಧರಾಗುವ ಷರತ್ತಿನೊಂದಿಗೆ ತಮ್ಮ ಧರ್ಮದಲ್ಲಿಯೇ ಉಳಿದುಕೊಂಡಿರುವ ಯಹೂದಿಗಳು ಮತ್ತು ಕ್ರೈಸ್ತರು. 3. ಕರಾರಿನಲ್ಲಿರುವವರನ್ನು ಕೊಲ್ಲುವುದು: ಇವರು ಮುಸ್ಲಿಮೇತರ ದೇಶದಲ್ಲಿರುವ ಸತ್ಯನಿಷೇಧಿಗಳಾಗಿದ್ದು, ಮುಸ್ಲಿಮರ ಮತ್ತು ಅವರ ನಡುವೆ ಶಾಂತಿ ಒಪ್ಪಂದವಿರುತ್ತದೆ. ಮುಸ್ಲಿಮರು ಅವರೊಂದಿಗೆ ಯುದ್ಧ ಮಾಡುವುದಿಲ್ಲ ಮತ್ತು ಅವರು ಮುಸ್ಲಿಮರೊಂದಿಗೆ ಯುದ್ಧ ಮಾಡುವುದಿಲ್ಲ. 4. ಸುರಕ್ಷತೆ ನೀಡಲಾದವರನ್ನು ಕೊಲ್ಲುವುದು: ಇವರು ಮುಸ್ಲಿಮರೊಂದಿಗೆ ಯುದ್ಧದಲ್ಲಿರುವ ಮುಸ್ಲಿಮೇತರ ದೇಶಗಳ ಸತ್ಯನಿಷೇಧಿಗಳಾಗಿದ್ದು, ಮುಸ್ಲಿಮರ ಮತ್ತು ಅವರ ನಡುವೆ ಯಾವುದೇ ಶಾಶ್ವತ ರಕ್ಷಣೆ ಅಥವಾ ಒಪ್ಪಂದವಿರುವುದಿಲ್ಲ, ಆದರೆ ಮುಸ್ಲಿಮರು (ಅಥವಾ ಮುಸ್ಲಿಮ್ ಆಡಳಿತಗಾರರು) ಅವರಿಗೆ ಮುಸ್ಲಿಂ ದೇಶವನ್ನು ಪ್ರವೇಶಿಸಲು ನಿಗದಿತ ಸಮಯದವರೆಗೆ ಸುರಕ್ಷತೆ ನೀಡಿರುತ್ತಾರೆ.
Attribution
[رواه البخاري]
Categories
Share
Share hadeeth
Sharing options · 0 Total shares

