ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದಿದಾಗ, (ತಮ್ಮ ಹಿಂದೆ) ಒಂದು ದಿರ್ಹಮ್ ಆಗಲಿ, ಒಂದು ದೀನಾರ್ ಆಗಲಿ, ಓರ್ವ ದಾಸನನ್ನಾಗಲಿ, ಓರ್ವ ದಾಸಿಯನ್ನಾಗಲಿ ಅಥವಾ ಬೇರೇನನ್ನೂ ಬಿಟ್ಟುಹೋಗಲಿಲ್ಲ. ಕೇವಲ ತಮ್ಮ ಬಿಳಿ ಹೇಸರಗತ್ತೆ, ತಮ್ಮ ಆಯುಧ ಮತ್ತು ತಾವು ದಾನವಾಗಿ ನೀಡಿದ ಒಂದು ಭೂಮಿಯನ್ನು ಹೊರತುಪಡಿಸಿ
Choose an available translation of this Hadeeth
Hadeeth text
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಾವಮೈದುನ ಮತ್ತು ಉಮ್ಮುಲ್ ಮೂಮಿನೀನ್ ಜುವೈರಿಯಾ ಬಿಂತ್ ಅಲ್-ಹಾರಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಸಹೋದರರಾದ ಅಮ್ರ್ ಬಿನ್ ಅಲ್-ಹಾರಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದಿದಾಗ, (ತಮ್ಮ ಹಿಂದೆ) ಒಂದು ದಿರ್ಹಮ್ ಆಗಲಿ, ಒಂದು ದೀನಾರ್ ಆಗಲಿ, ಓರ್ವ ದಾಸನನ್ನಾಗಲಿ, ಓರ್ವ ದಾಸಿಯನ್ನಾಗಲಿ ಅಥವಾ ಬೇರೇನನ್ನೂ ಬಿಟ್ಟುಹೋಗಲಿಲ್ಲ. ಕೇವಲ ತಮ್ಮ ಬಿಳಿ ಹೇಸರಗತ್ತೆ, ತಮ್ಮ ಆಯುಧ ಮತ್ತು ತಾವು ದಾನವಾಗಿ ನೀಡಿದ ಒಂದು ಭೂಮಿಯನ್ನು ಹೊರತುಪಡಿಸಿ."
Explanation
Benefits
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮರಣದ ನಂತರ ಏನನ್ನು ಬಿಟ್ಟುಹೋದರು ಎಂಬುದನ್ನು ವಿವರಿಸಲಾಗಿದೆ.
ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದಿದಾಗ (ಭೌತಿಕವಾಗಿ) ಮಹತ್ವದ್ದಾದುದನ್ನು ಏನನ್ನೂ ಬಿಟ್ಟುಹೋಗಲಿಲ್ಲ. ಇದಕ್ಕೆ ಕಾರಣ ಅವರ ಉದಾರತೆ, ದಾನ ಮತ್ತು ಸದ್ಗುಣಗಳಾಗಿದ್ದವು (ಅವರು ಎಲ್ಲವನ್ನೂ ದಾನ ಮಾಡುತ್ತಿದ್ದರು).
ಅಲ್-ಕಿರ್ಮಾನಿ ಹೇಳುತ್ತಾರೆ: "(ಅದನ್ನು ಅವರು ದಾನವಾಗಿ ನೀಡಿದರು)" ಎಂಬ ಮಾತಿನಲ್ಲಿರುವ ಸರ್ವನಾಮವು, ಆ ಮೂರೂ ವಸ್ತುಗಳಿಗೆ ಅಂದರೆ ಹೇಸರಗತ್ತೆ, ಆಯುಧ ಮತ್ತು ಭೂಮಿಗೆ ಅನ್ವಯಿಸುತ್ತದೆ; ಕೇವಲ ಭೂಮಿಗೆ ಮಾತ್ರವಲ್ಲ.
ಅಲ್-ಖತನ್: ಎಂದರೆ ಪತ್ನಿಯ ಸಹೋದರ (ಭಾವಮೈದುನ). 'ಅಲ್-ಅಖ್ತಾನ್' ಎಂದರೆ ಪತ್ನಿಯ ಕಡೆಯಿಂದ ಇರುವ ಸಂಬಂಧಿಕರು.
Attribution
Categories
Share hadeeth
Sharing options · 0 Total shares

