ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಸಿಗೆಯು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು
Choose an available translation of this Hadeeth
Hadeeth text
ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಸಿಗೆಯು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು." ಮುಸ್ಲಿಮ್ ಅವರ ವರದಿಯಲ್ಲಿ (ಹೀಗಿದೆ): "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒರಗಿಕೊಳ್ಳುತ್ತಿದ್ದ ದಿಂಬು ಹದಮಾಡಿದ ಚರ್ಮದ್ದಾಗಿತ್ತು ಮತ್ತು ಅದರ ಒಳಗಿನ ವಸ್ತು ಖರ್ಜೂರದ ನಾರಿನದಾಗಿತ್ತು."
Explanation
Benefits
ಹಾಸಿಗೆ ಮತ್ತು ದಿಂಬುಗಳನ್ನು ಇಟ್ಟುಕೊಳ್ಳುವುದು, ಅವುಗಳ ಮೇಲೆ ಮಲಗುವುದು ಮತ್ತು ಅವುಗಳನ್ನು ಆಧಾರವಾಗಿ ಬಳಸುವುದು ಸಮ್ಮತಾರ್ಹವಾಗಿದೆ.
ಮುಸ್ಲಿಮನು ತನ್ನ ಸ್ಥಿತಿ ಮತ್ತು ಜೀವನವನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಿತಿಯೊಂದಿಗೆ ಹೋಲಿಸಿ ನೋಡಿಕೊಳ್ಳಬೇಕು. ಏಕೆಂದರೆ ಅವರೇ ಅತ್ಯುತ್ತಮ ಮಾದರಿಯಾಗಿದ್ದಾರೆ. ಅವರ ಹೆಜ್ಜೆಗುರುತುಗಳನ್ನು ಅನುಸರಿಸುವವನು ಇಹಲೋಕ ಮತ್ತು ಪರಲೋಕದಲ್ಲಿ ಸರಿದಾರಿ ಮತ್ತು ಯಶಸ್ಸನ್ನು ಪಡೆಯುತ್ತಾನೆ.
ಪರಲೋಕಕ್ಕಾಗಿ ಸಿದ್ಧತೆ ನಡೆಸುವ ಬಗ್ಗೆ ಆಸಕ್ತಿ ವಹಿಸಬೇಕು. ವಿಶ್ವಾಸಿಯು ಅಲ್ಲಾಹನ ಆರಾಧನೆಗೆ ಸಹಾಯವಾಗುವಷ್ಟು ಮಾತ್ರ ಪ್ರಾಪಂಚಿಕ ಸಂಪತ್ತನ್ನು ಪಡೆಯಬೇಕು (ಅದರಲ್ಲೇ ತೃಪ್ತಿಪಡಬೇಕು). ಸಂಪತ್ತನ್ನು ಹೆಚ್ಚು ಹೆಚ್ಚು ಶೇಖರಿಸುವಲ್ಲಿ ಮಗ್ನನಾಗಬಾರದು. ಅಲ್ಲಾಹು ಅಂತಹವರನ್ನು ಟೀಕಿಸುತ್ತಾ ಹೀಗೆ ಹೇಳಿದ್ದಾನೆ: “ಹೆಚ್ಚು ಹೆಚ್ಚು ಪಡೆಯಬೇಕೆಂಬ ವ್ಯಾಮೋಹವು ನಿಮ್ಮನ್ನು ಮೈಮರೆಯುವಂತೆ ಮಾಡಿತು. ನೀವು ಗೋರಿಗಳನ್ನು ಸೇರುವ ತನಕ (ಇದೇ ಸ್ಥಿತಿಯಲ್ಲಿರುವಿರೇನು)” [ಅತ್ತಕಾತುರ್: 1-2].
Attribution
Categories
Share hadeeth
Sharing options · 0 Total shares

