ಯಾವುದೇ ಒಬ್ಬ ಮುಸ್ಲಿಮನಿಗೆ ಒಂದು ಆಪತ್ತು ಸಂಭವಿಸಿದಾಗ, ಅವನು ಅಲ್ಲಾಹು ಆದೇಶಿಸಿದಂತೆ: 'ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್' (ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನ ಕಡೆಗೆ ಮರಳುವವರು) [ಸೂರ ಅಲ್-ಬಖರಾ: 156], 'ಅಲ್ಲಾಹುಮ್ಮ ಅ್ಜುರ್ನೀ ಫೀ ಮುಸೀಬತೀ, ವ ಅಖ್ಲಿಫ್ ಲೀ ಖೈರನ್ ಮಿನ್ಹಾ' (ಓ ಅಲ್ಲಾಹನೇ, ನನ್ನ ಆಪತ್ತಿನಲ್ಲಿ ನನಗೆ ಪ್ರತಿಫಲ ನೀಡು, ಮತ್ತು ನನಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡು) ಎಂದು ಹೇಳಿದರೆ, ಅಲ್ಲಾಹು ಅವನಿಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡದೇ ಇರಲಾರನು
Choose an available translation of this Hadeeth
Hadeeth text
ಸತ್ಯವಿಶ್ವಾಸಿಗಳ ಮಾತೆ ಉಮ್ಮ್ ಸಲಮಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದ್ದೇನೆ: "ಯಾವುದೇ ಒಬ್ಬ ಮುಸ್ಲಿಮನಿಗೆ ಒಂದು ಆಪತ್ತು ಸಂಭವಿಸಿದಾಗ, ಅವನು ಅಲ್ಲಾಹು ಆದೇಶಿಸಿದಂತೆ: 'ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್' (ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನ ಕಡೆಗೆ ಮರಳುವವರು) [ಸೂರ ಅಲ್-ಬಖರಾ: 156], 'ಅಲ್ಲಾಹುಮ್ಮ ಅ್ಜುರ್ನೀ ಫೀ ಮುಸೀಬತೀ, ವ ಅಖ್ಲಿಫ್ ಲೀ ಖೈರನ್ ಮಿನ್ಹಾ' (ಓ ಅಲ್ಲಾಹನೇ, ನನ್ನ ಆಪತ್ತಿನಲ್ಲಿ ನನಗೆ ಪ್ರತಿಫಲ ನೀಡು, ಮತ್ತು ನನಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡು) ಎಂದು ಹೇಳಿದರೆ, ಅಲ್ಲಾಹು ಅವನಿಗೆ ಅದಕ್ಕಿಂತ ಉತ್ತಮವಾದುದನ್ನು ಬದಲಿಯಾಗಿ ನೀಡದೇ ಇರಲಾರನು". ಅವರು (ಉಮ್ಮ್ ಸಲಮಾ) ಹೇಳಿದರು: "ಅಬೂ ಸಲಮಾ (ಅವರ ಪತಿ) ಮರಣ ಹೊಂದಿದಾಗ, ನಾನು (ಮನಸ್ಸಿನಲ್ಲಿ) ಅಂದುಕೊಂಡೆ: 'ಅಬೂ ಸಲಮಾಗಿಂತ ಉತ್ತಮ ಮುಸ್ಲಿಂ ಯಾರು? ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡೆಗೆ ಹಿಜ್ರತ್ (ವಲಸೆ) ಹೋದ ಮೊದಲ ಮನೆತನ (ಅವರದ್ದಾಗಿದೆ)'. ನಂತರ ನಾನು ಅದನ್ನು (ಆ ಪ್ರಾರ್ಥನೆಯನ್ನು) ಹೇಳಿದೆನು. ಆಗ ಅಲ್ಲಾಹು ನನಗೆ (ಅದಕ್ಕೆ ಬದಲಿಯಾಗಿ) ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಪತಿಯಾಗಿ) ನೀಡಿದನು".
Explanation
Benefits
ಕಷ್ಟದ ಸಂದರ್ಭಗಳಲ್ಲಿ ಪ್ರಾರ್ಥನೆಯ ಮೂಲಕ ಅಲ್ಲಾಹನ ಕಡೆಗೆ ಮುಖ ಮಾಡಬೇಕು; ಏಕೆಂದರೆ ಅವನ ಬಳಿ (ಎಲ್ಲದ್ದಕ್ಕೂ) ಪರಿಹಾರವಿದೆ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶದ ಹಿಂದಿರುವ ವಿವೇಕವು ತಿಳಿಯದೇ ಹೋದರೂ ಸಹ, ಸತ್ಯವಿಶ್ವಾಸಿಯು ಅದನ್ನು ಪಾಲಿಸುವುದು ಅತ್ಯಗತ್ಯವಾಗಿದೆ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶವನ್ನು ಸತ್ಯವಿಶ್ವಾಸಿ ಪಾಲಿಸುವುದರಲ್ಲಿಯೇ ಸಂಪೂರ್ಣ ಒಳಿತಿದೆ.
Attribution
Categories
Share hadeeth
Sharing options · 0 Total shares

