ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಪ್ರವಾದಿಯವರ ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ' (ಓ ಅಲ್ಲಾಹ್, ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ)
Choose an available translation of this Hadeeth
Hadeeth text
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಯಾರಾದರೂ ಮಸೀದಿಯನ್ನು ಪ್ರವೇಶಿಸಿದರೆ, ಪ್ರವಾದಿಯವರ ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಫ್ತಹ್ ಲೀ ಅಬ್ವಾಬ ರಹ್ಮತಿಕ' (ಓ ಅಲ್ಲಾಹ್, ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ). ಮತ್ತು ಅವನು ಹೊರಬರುವಾಗ, ಪ್ರವಾದಿಯವರ ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಅ'ಅಸಿಮ್ನೀ ಮಿನ ಶ್ಶೈತಾನಿ ರ್ರಜೀಮ್' (ಓ ಅಲ್ಲಾಹ್, ಶಪಿಸಲ್ಪಟ್ಟ ಶೈತಾನನಿಂದ ನನ್ನನ್ನು ರಕ್ಷಿಸು)." ಅಲ್-ಹಾಕಿಮ್ ರವರ ವರದಿಯಲ್ಲಿ (ಹೀಗಿದೆ): "ಮತ್ತು ಅವನು ಹೊರಬರುವಾಗ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾಂ ಹೇಳಲಿ ಮತ್ತು ಹೀಗೆ ಹೇಳಲಿ: 'ಅಲ್ಲಾಹುಮ್ಮ ಅಜಿರ್ನೀ ಮಿನ ಶ್ಶೈತಾನಿ ರ್ರಜೀಮ್' (ಓ ಅಲ್ಲಾಹ್, ಶಪಿಸಲ್ಪಟ್ಟ ಶೈತಾನನಿಂದ ನನ್ನನ್ನು ಕಾಪಾಡು)."
Explanation
Benefits
ಈ ಝಿಕ್ರ್ (ಸ್ಮರಣೆ) ಎಲ್ಲಾ ಮಸೀದಿಗಳಿಗೆ ಸಾಮಾನ್ಯವಾಗಿ ಅನ್ವಯಿಸುತ್ತದೆ. ಇದರಲ್ಲಿ ಮಸ್ಜಿದುಲ್ ಹರಾಮ್ ಕೂಡ ಸೇರಿದೆ.
ಪ್ರವೇಶಿಸುವಾಗ 'ರಹ್ಮತ್' (ಕರುಣೆ) ಮತ್ತು ಹೊರಬರುವಾಗ ಶೈತಾನನಿಂದ 'ರಕ್ಷಣೆ'ಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಲು ಕಾರಣ: ಒಳಗೆ ಪ್ರವೇಶಿಸುವವನು ಅಲ್ಲಾಹನಿಗೆ ಮತ್ತು ಅವನ ಸ್ವರ್ಗಕ್ಕೆ ಹತ್ತಿರವಾಗಿಸುವ ಕಾರ್ಯಗಳಲ್ಲಿ ತೊಡಗಿರುತ್ತಾನೆ, ಆದ್ದರಿಂದ (ಅಲ್ಲಾಹನ) ಕರುಣೆಯನ್ನು ಪ್ರಸ್ತಾಪಿಸುವುದು ಸೂಕ್ತವಾಗಿದೆ. ಅವನು ಹೊರಬಂದಾಗ, ಪ್ರಾಪಂಚಿಕ ವಿಷಯಗಳು ಮತ್ತು ವ್ಯಾಕುಲತೆಗಳು (ಗೊಂದಲಗಳು) ಇರುವ ಜಗತ್ತಿಗೆ ಹೋಗುತ್ತಾನೆ. ಆದ್ದರಿಂದ ಶೈತಾನನಿಂದ ರಕ್ಷಣೆ ಮತ್ತು ಆಶ್ರಯವನ್ನು ಅಲ್ಲಾಹನ ಬಳಿ ಬೇಡುವುದು ಸೂಕ್ತವಾಗಿದೆ.
Attribution
Categories
Share hadeeth
Sharing options · 0 Total shares

