ಯಾವುದೇ ಪ್ರವಾದಿಯಿದ್ದರೂ, ಮನುಷ್ಯರು ಅವರ ಮೇಲೆ ವಿಶ್ವಾಸವಿಡುವಂತಹ ಪವಾಡಗಳನ್ನು (ದೃಷ್ಟಾಂತಗಳನ್ನು) ಅವರಿಗೆ ನೀಡಲಾಗಿತ್ತು
Choose an available translation of this Hadeeth
Hadeeth text
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಪ್ರವಾದಿಯಿದ್ದರೂ, ಮನುಷ್ಯರು ಅವರ ಮೇಲೆ ವಿಶ್ವಾಸವಿಡುವಂತಹ ಪವಾಡಗಳನ್ನು (ದೃಷ್ಟಾಂತಗಳನ್ನು) ಅವರಿಗೆ ನೀಡಲಾಗಿತ್ತು. ಆದರೆ ನನಗೆ ನೀಡಲಾಗಿರುವುದು, ಅಲ್ಲಾಹು ನನಗೆ ಅವತೀರ್ಣಗೊಳಿಸಿದ ದಿವ್ಯವಾಣಿಯಾಗಿದೆ (ಕುರ್ಆನ್). ಆದಕಾರಣ, ಪುನರುತ್ಥಾನ ದಿನದಂದು ಅವರ ಪೈಕಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗಬೇಕು ಎಂದು ನಾನು ಆಶಿಸುತ್ತೇನೆ".
Explanation
Benefits
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಾಡದ ಮಹತ್ವವನ್ನು ಇದು ವಿವರಿಸುತ್ತದೆ.
ಇತರ ಪ್ರವಾದಿಗಳಿಗಿಂತ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಾನಮಾನ ಮತ್ತು ಶ್ರೇಷ್ಠತೆಯನ್ನು ಇದು ತೋರಿಸುತ್ತದೆ.
ಇಬ್ನ್ ಹಜರ್ ಹೇಳುತ್ತಾರೆ: "ಆದರೆ ನನಗೆ ನೀಡಲಾಗಿರುವುದು, ಅಲ್ಲಾಹು ನನಗೆ ಅವತೀರ್ಣಗೊಳಿಸಿದ ದಿವ್ಯವಾಣಿಯಾಗಿದೆ" ಎಂಬ ಮಾತಿನ ಅರ್ಥವೇನೆಂದರೆ, ಅವರ ಪವಾಡಗಳು ಕೇವಲ ಇದಕ್ಕೆ (ಕುರ್ಆನ್ಗೆ) ಸೀಮಿತ ಎಂದಲ್ಲ. ಅಥವಾ ಹಿಂದಿನವರಿಗಿದ್ದಂತಹ ಪವಾಡಗಳು ಇವರಿಗಿರಲಿಲ್ಲ ಎಂದಲ್ಲ. ಬದಲಾಗಿ, ಇದು ಇತರರಿಗಿಂತ ಭಿನ್ನವಾಗಿ ಇವರಿಗೆ ಮಾತ್ರ ನೀಡಲಾದ ಅತ್ಯುನ್ನತ ಪವಾಡವಾಗಿದೆ.
ನವವಿ ಹೇಳುತ್ತಾರೆ: "(ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗಲಿರುವೆ) ಎಂಬ ಮಾತು ಪ್ರವಾದಿತ್ವದ ಕುರುಹುಗಳಲ್ಲಿ ಒಂದಾಗಿದೆ. ಮುಸ್ಲಿಮರ ಸಂಖ್ಯೆ ಬಹಳ ಕಡಿಮೆಯಿದ್ದ ಕಾಲದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತನ್ನು ಹೇಳಿದ್ದರು. ನಂತರ ಅಲ್ಲಾಹು ಮುಸ್ಲಿಮರಿಗೆ ವಿಜಯ ನೀಡಿದನು ಮತ್ತು ಅವರಲ್ಲಿ ಅಭಿವೃದ್ಧಿ (ಬರಕತ್) ನೀಡಿದನು. ಇಂದು ನಮಗೆ ತಿಳಿದಿರುವಂತೆ ಇಸ್ಲಾಂ ಧರ್ಮವು ಈ ಹಂತದವರೆಗೆ ವಿಶಾಲವಾಗಿ ಹರಡಿದೆ. ಅಲ್-ಹಮ್ದುಲಿಲ್ಲಾಹ್."
Attribution
Categories
Share hadeeth
Sharing options · 0 Total shares

