ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್-ಅಜ್ಝಿ ವಲ್-ಕಸಲಿ ವಲ್-ಜುಬ್ನಿ ವಲ್-ಬುಖ್ಲಿ ವಲ್-ಹರಮಿ ವ ಅಝಾಬಿಲ್-ಖಬ್ರ್. (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿನ್ನಲ್ಲಿ ಅಶಕ್ತತೆ, ಸೋಮಾರಿತನ, ಹೇಡಿತನ, ಜಿಪುಣತನ, ಅತಿ ವೃದ್ಧಾಪ್ಯ ಮತ್ತು ಸಮಾಧಿಯ ಶಿಕ್ಷೆಯಿಂದ ಅಭಯ ಕೋರುತ್ತೇನೆ). ಅಲ್ಲಾಹುಮ್ಮ ಆತಿ ನಫ್ಸೀ ತಖ್ವಾಹಾ, ವ ಝಕ್ಕಿಹಾ ಅಂತ ಖೈರು ಮನ್ ಝಕ್ಕಾಹಾ, ಅಂತ ವಲಿಯ್ಯುಹಾ ವ ಮೌಲಾಹಾ. (ಅರ್ಥ: ಓ ಅಲ್ಲಾಹನೇ, ನನ್ನ ಆತ್ಮಕ್ಕೆ ಅದರ ತಖ್ವಾವನ್ನು (ದೇವಭಕ್ತಿಯನ್ನು) ನೀಡು, ಮತ್ತು ಅದನ್ನು ಪರಿಶುದ್ಧಗೊಳಿಸು, ನೀನೇ ಅದನ್ನು ಪರಿಶುದ್ಧಗೊಳಿಸುವವರಲ್ಲಿ ಅತ್ಯುತ್ತಮನು. ನೀನೇ ಅದರ 'ವಲೀ' (ರಕ್ಷಕ ಮಿತ್ರ) ಮತ್ತು 'ಮೌಲಾ' (ಒಡೆಯ)). "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಇಲ್ಮಿನ್ ಲಾ ಯನ್ಫಅ್, ವ ಮಿನ್ ಖಲ್ಬಿನ್ ಲಾ ಯಖ್ಶಅ್, ವ ಮಿನ್ ನಫ್ಸಿನ್ ಲಾ ತಶ್ಬಅ್, ವ ಮಿನ್ ದಅ್ವತಿನ್ ಲಾ ಯುಸ್ತಜಾಬು ಲಹಾ". (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ಪ್ರಯೋಜನ ನೀಡದ ಜ್ಞಾನದಿಂದ, ವಿನಯವಿಲ್ಲದ ಹೃದಯದಿಂದ, ಆಸೆ ತೀರದ ಆತ್ಮದಿಂದ, ಮತ್ತು ಸ್ವೀಕರಿಸಲ್ಪಡದ ಪ್ರಾರ್ಥನೆಯಿಂದ ನಿನ್ನಲ್ಲಿ ಅಭಯ ಕೋರುತ್ತೇನೆ)
Choose an available translation of this Hadeeth
Hadeeth text
ಝೈದ್ ಇಬ್ನ್ ಅರ್ಖಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಹೇಳುತ್ತಿದ್ದರೋ ಅದನ್ನು ಹೊರತುಪಡಿಸಿ ನಾನು ನಿಮಗೆ ಬೇರೇನೂ ಹೇಳುವುದಿಲ್ಲ. ಅವರು ಹೇಳುತ್ತಿದ್ದರು: "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್-ಅಜ್ಝಿ ವಲ್-ಕಸಲಿ ವಲ್-ಜುಬ್ನಿ ವಲ್-ಬುಖ್ಲಿ ವಲ್-ಹರಮಿ ವ ಅಝಾಬಿಲ್-ಖಬ್ರ್. (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿನ್ನಲ್ಲಿ ಅಶಕ್ತತೆ, ಸೋಮಾರಿತನ, ಹೇಡಿತನ, ಜಿಪುಣತನ, ಅತಿ ವೃದ್ಧಾಪ್ಯ ಮತ್ತು ಸಮಾಧಿಯ ಶಿಕ್ಷೆಯಿಂದ ಅಭಯ ಕೋರುತ್ತೇನೆ). ಅಲ್ಲಾಹುಮ್ಮ ಆತಿ ನಫ್ಸೀ ತಖ್ವಾಹಾ, ವ ಝಕ್ಕಿಹಾ ಅಂತ ಖೈರು ಮನ್ ಝಕ್ಕಾಹಾ, ಅಂತ ವಲಿಯ್ಯುಹಾ ವ ಮೌಲಾಹಾ. (ಅರ್ಥ: ಓ ಅಲ್ಲಾಹನೇ, ನನ್ನ ಆತ್ಮಕ್ಕೆ ಅದರ ತಖ್ವಾವನ್ನು (ದೇವಭಕ್ತಿಯನ್ನು) ನೀಡು, ಮತ್ತು ಅದನ್ನು ಪರಿಶುದ್ಧಗೊಳಿಸು, ನೀನೇ ಅದನ್ನು ಪರಿಶುದ್ಧಗೊಳಿಸುವವರಲ್ಲಿ ಅತ್ಯುತ್ತಮನು. ನೀನೇ ಅದರ 'ವಲೀ' (ರಕ್ಷಕ ಮಿತ್ರ) ಮತ್ತು 'ಮೌಲಾ' (ಒಡೆಯ)). "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಇಲ್ಮಿನ್ ಲಾ ಯನ್ಫಅ್, ವ ಮಿನ್ ಖಲ್ಬಿನ್ ಲಾ ಯಖ್ಶಅ್, ವ ಮಿನ್ ನಫ್ಸಿನ್ ಲಾ ತಶ್ಬಅ್, ವ ಮಿನ್ ದಅ್ವತಿನ್ ಲಾ ಯುಸ್ತಜಾಬು ಲಹಾ". (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ಪ್ರಯೋಜನ ನೀಡದ ಜ್ಞಾನದಿಂದ, ವಿನಯವಿಲ್ಲದ ಹೃದಯದಿಂದ, ಆಸೆ ತೀರದ ಆತ್ಮದಿಂದ, ಮತ್ತು ಸ್ವೀಕರಿಸಲ್ಪಡದ ಪ್ರಾರ್ಥನೆಯಿಂದ ನಿನ್ನಲ್ಲಿ ಅಭಯ ಕೋರುತ್ತೇನೆ).
Explanation
Benefits
ತಖ್ವಾ (ದೈವಭಕ್ತಿ), ಜ್ಞಾನವನ್ನು ಹರಡುವುದು ಮತ್ತು ಅದರಂತೆ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ.
ಪ್ರಯೋಜನಕಾರಿ ಜ್ಞಾನವೆಂದರೆ ಅದು ಆತ್ಮವನ್ನು ಪರಿಶುದ್ಧಗೊಳಿಸುತ್ತದೆ ಮತ್ತು ಅದರಲ್ಲಿ ಅಲ್ಲಾಹನ ಭಯವನ್ನು ಹುಟ್ಟಿಸುತ್ತದೆ, ನಂತರ ಅದು ಇತರ ಎಲ್ಲಾ ಅಂಗಾಂಗಗಳಿಗೆ ಹರಡುತ್ತದೆ.
'ಖಾಶಿಅ್' (ವಿನಯ/ಭಯಭಕ್ತಿಯುಳ್ಳ) ಹೃದಯವೆಂದರೆ ಅದು ಅಲ್ಲಾಹನನ್ನು ಸ್ಮರಿಸಿದಾಗ ಭಯಪಡುತ್ತದೆ ಮತ್ತು ಕಂಪಿಸುತ್ತದೆ, ನಂತರ ಮೃದುವಾಗುತ್ತದೆ.
ಇಹಲೋಕದ ದುರಾಸೆ ಮತ್ತು ಅದರ ಆಸೆಗಳು ಹಾಗೂ ಸುಖಗಳಿಂದ ತೃಪ್ತಿಯಿಲ್ಲದಿರುವುದನ್ನು ಖಂಡಿಸಲಾಗಿದೆ. ಇಹಲೋಕದ ಸುಖಭೋಗಗಳಿಗಾಗಿ ದುರಾಸೆಪಡುವ ಮನಸ್ಸು ಮನುಷ್ಯನ ಅತಿದೊಡ್ಡ ಶತ್ರುವಾಗಿದೆ. ಈ ಕಾರಣದಿಂದಲೇ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದರಿಂದ ಅಭಯ ಕೋರಿದರು.
ಪ್ರಾರ್ಥನೆಗಳು ತಿರಸ್ಕರಿಸಲ್ಪಡಲು ಮತ್ತು ಸ್ವೀಕರಿಸಲ್ಪಡದಿರಲು ಕಾರಣವಾಗುವ ವಿಷಯಗಳಿಂದ ದಾಸನು ದೂರವಿರಬೇಕು.
ಇಮಾಮ್ ನವವಿ ಹೇಳುತ್ತಾರೆ: "ಪ್ರಾರ್ಥನೆಯಲ್ಲಿ ನಿಂದನೀಯವಾದ ಪ್ರಾಸ (ಸಜ್ಅ್) ಎಂದರೆ ಅದು ಕೃತಕವಾಗಿ ಮಾಡುವಂಥದ್ದು ಎಂದು ವಿದ್ವಾಂಸರು ಹೇಳಿದ್ದಕ್ಕೆ ಈ ಹದೀಸ್ ಮತ್ತು ಪ್ರಾಸಬದ್ಧವಾದ ಇತರ ಪ್ರಾರ್ಥನೆಗಳು ಪುರಾವೆಯಾಗಿವೆ. ಏಕೆಂದರೆ ಅದು ವಿನಯ, ಅಧೀನತೆ ಮತ್ತು ನಿಷ್ಕಳಂಕತೆಯನ್ನು ಹೋಗಲಾಡಿಸುತ್ತದೆ, ಮತ್ತು ದೈನ್ಯತೆ, ಅವಲಂಬನೆ ಮತ್ತು ಹೃದಯದ ಏಕಾಗ್ರತೆಯಿಂದ ವಿಮುಖಗೊಳಿಸುತ್ತದೆ. ಆದರೆ, ಯಾವುದು ಕೃತಕತೆಯಿಲ್ಲದೆ ಮತ್ತು ಪರಿಪೂರ್ಣ ವಾಕ್ಚಾತುರ್ಯ ಇತ್ಯಾದಿಗಳಿಂದಾಗಿ ಯೋಚಿಸದೆ ಬರುತ್ತದೆಯೋ, ಅಥವಾ ಕಂಠಪಾಠ ಮಾಡಿದ್ದಾಗಿದೆಯೋ, ಅದರಲ್ಲಿ ಯಾವುದೇ ತಪ್ಪಿಲ್ಲ, ಬದಲಿಗೆ ಅದು ಉತ್ತಮವಾಗಿದೆ."
Attribution
Categories
Share hadeeth
Sharing options · 0 Total shares

