HadeethEnc · 1.36.0
ವಸಿಯ್ಯತ್ (ಮರಣಶಾಸನ) ಮಾಡಲು ಏನಾದರೂ (ವಿಷಯ/ಸಂಪತ್ತು) ಇರುವ ಯಾವುದೇ ಮುಸ್ಲಿಂ ವ್ಯಕ್ತಿಗೆ, ತನ್ನ ವಸಿಯ್ಯತ್ ಅನ್ನು ತನ್ನ ಬಳಿ ಬರೆದಿಡದೆ ಮೂರು ರಾತ್ರಿಗಳನ್ನು ಕಳೆಯುವ ಹಕ್ಕಿಲ್ಲ (ಅಥವಾ ಹಾಗೆ ಕಳೆಯುವುದು ಅವನಿಗೆ ತಕ್ಕುದಲ್ಲ)
Available translations
Choose an available translation of this Hadeeth
01
Hadeeth text
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದರು: "ವಸಿಯ್ಯತ್ (ಮರಣಶಾಸನ) ಮಾಡಲು ಏನಾದರೂ (ವಿಷಯ/ಸಂಪತ್ತು) ಇರುವ ಯಾವುದೇ ಮುಸ್ಲಿಂ ವ್ಯಕ್ತಿಗೆ, ತನ್ನ ವಸಿಯ್ಯತ್ ಅನ್ನು ತನ್ನ ಬಳಿ ಬರೆದಿಡದೆ ಮೂರು ರಾತ್ರಿಗಳನ್ನು ಕಳೆಯುವ ಹಕ್ಕಿಲ್ಲ (ಅಥವಾ ಹಾಗೆ ಕಳೆಯುವುದು ಅವನಿಗೆ ತಕ್ಕುದಲ್ಲ)".. ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ ದಿನದಿಂದ, ನಾನು ನನ್ನ ಬಳಿ ನನ್ನ ವಸಿಯ್ಯತ್ ಬರೆದಿಡದೆ ಒಂದು ರಾತ್ರಿಯನ್ನೂ ಕಳೆದಿಲ್ಲ".
02
Explanation
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಯಾವುದೇ ಮುಸ್ಲಿಂ ವ್ಯಕ್ತಿಗೆ ಹಕ್ಕುಗಳು ಅಥವಾ ಸಂಪತ್ತಿನ ವಿಷಯದಲ್ಲಿ, ಅದು ಸ್ವಲ್ಪವೇ ಆಗಿದ್ದರೂ ಸಹ, ವಸಿಯ್ಯತ್ ಮಾಡಲು ಏನಾದರೂ ಇದ್ದರೆ, ಅವನು ತನ್ನ ವಸಿಯ್ಯತ್ ಅನ್ನು ತನ್ನ ಬಳಿ ಬರೆದಿಡದೆ ಮೂರು ರಾತ್ರಿಗಳನ್ನು ಕಳೆಯುವುದು ಸೂಕ್ತವಲ್ಲ. ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ ದಿನದಿಂದ, ನಾನು ನನ್ನ ಬಳಿ ನನ್ನ ವಸಿಯ್ಯತ್ ಬರೆದಿಡದೆ ಒಂದು ರಾತ್ರಿಯನ್ನೂ ಕಳೆದಿಲ್ಲ.
03
Benefits
ವಸಿಯ್ಯತ್ ಮಾಡುವುದನ್ನು ನಿಯಮಗೊಳಿಸಲಾಗಿದೆ. ಅದನ್ನು ವಿವರಿಸುವುದು, ಅದಕ್ಕೆ ಸಂಬಂಧಿಸಿದ ಧಾರ್ಮಿಕ ಆದೇಶವನ್ನು ಪಾಲಿಸುವುದು, ಮರಣಕ್ಕಾಗಿ ಸಿದ್ಧರಾಗುವುದು, ಮತ್ತು ಯಾವುದೇ ವಿಷಯವು ಅದರಿಂದ ವಿಮುಖಗೊಳಿಸುವ ಮೊದಲು, ಅದರ ಬಗ್ಗೆ ಮತ್ತು ಅದನ್ನು ಎಲ್ಲಿ ಖರ್ಚು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ಅರಿವು ಹೊಂದುವುದು ಮುಂತಾದ ವಿಷಯಗಳಿಗಾಗಿ ತ್ವರೆ ಮಾಡಬೇಕು.
ವಸಿಯ್ಯತ್ (ಮರಣಶಾಸನ) ಎಂದರೆ ಕರಾರು ಅಥವಾ ಒಪ್ಪಂದ. ಅಂದರೆ, ಒಬ್ಬ ವ್ಯಕ್ತಿಯು ತನ್ನ ಮರಣದ ನಂತರ ತನ್ನ ಸಂಪತ್ತಿನ ಸ್ವಲ್ಪ ಭಾಗವನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಗೆ ವಹಿಸಿಕೊಡುವುದು, ಅಥವಾ ತನ್ನ ಚಿಕ್ಕ ಮಕ್ಕಳ ಆರೈಕೆ ಮಾಡಲು ಒಬ್ಬ ವ್ಯಕ್ತಿಗೆ ವಹಿಸಿಕೊಡುವುದು, ಅಥವಾ ತನ್ನ ಮರಣದ ನಂತರ ತನಗೆ ಸಂಬಂಧಿಸಿದ ಯಾವುದೇ ಕಾರ್ಯಗಳ ಬಗ್ಗೆ ಒಬ್ಬ ವ್ಯಕ್ತಿಗೆ ವಹಿಸಿಕೊಡುವುದು.
ವಸಿಯ್ಯತ್ಗಳಲ್ಲಿ ಮೂರು ವಿಧಗಳಿವೆ: 1. ಮುಸ್ತಹಬ್ (ಅಪೇಕ್ಷಿತ): ಅಂದರೆ, ಮರಣದ ನಂತರ ತನಗೆ ಪ್ರತಿಫಲ ತಲುಪಬೇಕೆಂಬ ಉದ್ದೇಶದಿಂದ ತನ್ನ ಸಂಪತ್ತಿನ ಸ್ವಲ್ಪ ಭಾಗವನ್ನು ಒಳಿತಿನ ಮಾರ್ಗದಲ್ಲಿ ಖರ್ಚು ಮಾಡಲು ವಸಿಯ್ಯತ್ ಮಾಡುವುದು. 2. ವಾಜಿಬ್ (ಕಡ್ಡಾಯ): ಅಂದರೆ, ಪೂರೈಸಬೇಕಾದ ಹಕ್ಕುಗಳ ಬಗ್ಗೆ ವಸಿಯ್ಯತ್ ಮಾಡುವುದು. ಈ ಹಕ್ಕುಗಳು ಸರ್ವಶಕ್ತನಾದ ಅಲ್ಲಾಹನಿಗೆ ಸಂಬಂಧಿಸಿರಬಹುದು — ಉದಾಹರಣೆಗೆ ಝಕಾತ್ ನೀಡದಿದ್ದರೆ, ಅಥವಾ (ಪಾಪಗಳಿಗೆ) ಪ್ರಾಯಶ್ಚಿತ್ತ ನೀಡದಿದ್ದರೆ ಅದಕ್ಕಾಗಿ ವಸಿಯ್ಯತ್ ಮಾಡುವುದು, ಮುಂತಾದ ಧಾರ್ಮಿಕ ನಿಯಮದಿಂದಾಗಿ ಕಡ್ಡಾಯವಾಗಿರುವ ವಿಷಯಗಳು. ಅಥವಾ ಈ ಹಕ್ಕುಗಳು ಮಾನವರಿಗೆ ಸಂಬಂಧಿಸಿರಬಹುದು — ಉದಾಹರಣೆಗೆ ಸಾಲ, ಮತ್ತು ನಂಬಿಕೆಯಿಂದ ಒಪ್ಪಿಸಿದ ವಸ್ತುಗಳನ್ನು ಹಿಂತಿರುಗಿಸುವುದು. 3. ಹರಾಮ್ (ನಿಷಿದ್ಧ): ಅಂದರೆ, ತನ್ನ ಸಂಪತ್ತಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ವಸಿಯ್ಯತ್ ಮಾಡುವುದು, ಅಥವಾ ಒಬ್ಬ ವಾರಸುದಾರನಿಗೆ (ಮಾತ್ರ ಹೆಚ್ಚು ನೀಡಲು) ವಸಿಯ್ಯತ್ ಮಾಡುವುದು.
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು, ಮತ್ತು ಅವರು ಒಳಿತಿನ ಕಾರ್ಯಗಳನ್ನು ಮಾಡಲು ಆತುರಪಡುತ್ತಿದ್ದುದನ್ನು, ಹಾಗೂ ವಿವೇಕವಂತನಾದ ಶಾಸನಕರ್ತನನ್ನು (ಅಲ್ಲಾಹು ಅಥವಾ ಪ್ರವಾದಿ) ಅನುಸರಿಸುತ್ತಿದ್ದುದನ್ನು ತಿಳಿಸಲಾಗಿದೆ.
ಇಬ್ನ್ ದಕೀಕುಲ್-ಈದ್ ಹೇಳುತ್ತಾರೆ: ಎರಡು ಅಥವಾ ಮೂರು ರಾತ್ರಿಗಳವರೆಗೆ ರಿಯಾಯಿತಿ ನೀಡಿರುವುದು ಸಂಕಟ ಮತ್ತು ಕಷ್ಟವನ್ನು ನಿವಾರಿಸುವುದಕ್ಕಾಗಿದೆ.
ಪ್ರಮುಖ ವಿಷಯಗಳನ್ನು ಬರವಣಿಗೆಯ ಮೂಲಕ ದಾಖಲಿಸಬೇಕು. ಏಕೆಂದರೆ, ಹಕ್ಕುಗಳನ್ನು ಸ್ಥಾಪಿಸಲು ಮತ್ತು ಸಂರಕ್ಷಿಸಲು ಅದು ಹೆಚ್ಚು ಬಲ ನೀಡುತ್ತದೆ.
ವಸಿಯ್ಯತ್ (ಮರಣಶಾಸನ) ಎಂದರೆ ಕರಾರು ಅಥವಾ ಒಪ್ಪಂದ. ಅಂದರೆ, ಒಬ್ಬ ವ್ಯಕ್ತಿಯು ತನ್ನ ಮರಣದ ನಂತರ ತನ್ನ ಸಂಪತ್ತಿನ ಸ್ವಲ್ಪ ಭಾಗವನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಗೆ ವಹಿಸಿಕೊಡುವುದು, ಅಥವಾ ತನ್ನ ಚಿಕ್ಕ ಮಕ್ಕಳ ಆರೈಕೆ ಮಾಡಲು ಒಬ್ಬ ವ್ಯಕ್ತಿಗೆ ವಹಿಸಿಕೊಡುವುದು, ಅಥವಾ ತನ್ನ ಮರಣದ ನಂತರ ತನಗೆ ಸಂಬಂಧಿಸಿದ ಯಾವುದೇ ಕಾರ್ಯಗಳ ಬಗ್ಗೆ ಒಬ್ಬ ವ್ಯಕ್ತಿಗೆ ವಹಿಸಿಕೊಡುವುದು.
ವಸಿಯ್ಯತ್ಗಳಲ್ಲಿ ಮೂರು ವಿಧಗಳಿವೆ: 1. ಮುಸ್ತಹಬ್ (ಅಪೇಕ್ಷಿತ): ಅಂದರೆ, ಮರಣದ ನಂತರ ತನಗೆ ಪ್ರತಿಫಲ ತಲುಪಬೇಕೆಂಬ ಉದ್ದೇಶದಿಂದ ತನ್ನ ಸಂಪತ್ತಿನ ಸ್ವಲ್ಪ ಭಾಗವನ್ನು ಒಳಿತಿನ ಮಾರ್ಗದಲ್ಲಿ ಖರ್ಚು ಮಾಡಲು ವಸಿಯ್ಯತ್ ಮಾಡುವುದು. 2. ವಾಜಿಬ್ (ಕಡ್ಡಾಯ): ಅಂದರೆ, ಪೂರೈಸಬೇಕಾದ ಹಕ್ಕುಗಳ ಬಗ್ಗೆ ವಸಿಯ್ಯತ್ ಮಾಡುವುದು. ಈ ಹಕ್ಕುಗಳು ಸರ್ವಶಕ್ತನಾದ ಅಲ್ಲಾಹನಿಗೆ ಸಂಬಂಧಿಸಿರಬಹುದು — ಉದಾಹರಣೆಗೆ ಝಕಾತ್ ನೀಡದಿದ್ದರೆ, ಅಥವಾ (ಪಾಪಗಳಿಗೆ) ಪ್ರಾಯಶ್ಚಿತ್ತ ನೀಡದಿದ್ದರೆ ಅದಕ್ಕಾಗಿ ವಸಿಯ್ಯತ್ ಮಾಡುವುದು, ಮುಂತಾದ ಧಾರ್ಮಿಕ ನಿಯಮದಿಂದಾಗಿ ಕಡ್ಡಾಯವಾಗಿರುವ ವಿಷಯಗಳು. ಅಥವಾ ಈ ಹಕ್ಕುಗಳು ಮಾನವರಿಗೆ ಸಂಬಂಧಿಸಿರಬಹುದು — ಉದಾಹರಣೆಗೆ ಸಾಲ, ಮತ್ತು ನಂಬಿಕೆಯಿಂದ ಒಪ್ಪಿಸಿದ ವಸ್ತುಗಳನ್ನು ಹಿಂತಿರುಗಿಸುವುದು. 3. ಹರಾಮ್ (ನಿಷಿದ್ಧ): ಅಂದರೆ, ತನ್ನ ಸಂಪತ್ತಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ವಸಿಯ್ಯತ್ ಮಾಡುವುದು, ಅಥವಾ ಒಬ್ಬ ವಾರಸುದಾರನಿಗೆ (ಮಾತ್ರ ಹೆಚ್ಚು ನೀಡಲು) ವಸಿಯ್ಯತ್ ಮಾಡುವುದು.
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು, ಮತ್ತು ಅವರು ಒಳಿತಿನ ಕಾರ್ಯಗಳನ್ನು ಮಾಡಲು ಆತುರಪಡುತ್ತಿದ್ದುದನ್ನು, ಹಾಗೂ ವಿವೇಕವಂತನಾದ ಶಾಸನಕರ್ತನನ್ನು (ಅಲ್ಲಾಹು ಅಥವಾ ಪ್ರವಾದಿ) ಅನುಸರಿಸುತ್ತಿದ್ದುದನ್ನು ತಿಳಿಸಲಾಗಿದೆ.
ಇಬ್ನ್ ದಕೀಕುಲ್-ಈದ್ ಹೇಳುತ್ತಾರೆ: ಎರಡು ಅಥವಾ ಮೂರು ರಾತ್ರಿಗಳವರೆಗೆ ರಿಯಾಯಿತಿ ನೀಡಿರುವುದು ಸಂಕಟ ಮತ್ತು ಕಷ್ಟವನ್ನು ನಿವಾರಿಸುವುದಕ್ಕಾಗಿದೆ.
ಪ್ರಮುಖ ವಿಷಯಗಳನ್ನು ಬರವಣಿಗೆಯ ಮೂಲಕ ದಾಖಲಿಸಬೇಕು. ಏಕೆಂದರೆ, ಹಕ್ಕುಗಳನ್ನು ಸ್ಥಾಪಿಸಲು ಮತ್ತು ಸಂರಕ್ಷಿಸಲು ಅದು ಹೆಚ್ಚು ಬಲ ನೀಡುತ್ತದೆ.
Attribution
[متفق عليه]
Categories
Share
Share hadeeth
Sharing options · 0 Total shares

