“ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯ ಮಾತನ್ನೇ ಆಡಲಿ ಅಥವಾ ಮೌನವಾಗಿರಲಿ
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯ ಮಾತನ್ನೇ ಆಡಲಿ ಅಥವಾ ಮೌನವಾಗಿರಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ನೆರೆಮನೆಯವನನ್ನು ಗೌರವಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಗಳನ್ನು ಗೌರವಿಸಲಿ.”
Explanation
ಮೊದಲನೆಯದು: ಒಳ್ಳೆಯ ಮಾತುಗಳನ್ನು ಆಡುವುದು. ಉದಾ: ಸುಬ್ಹಾನಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮುಂತಾದ ದಿಕ್ರ್ಗಳನ್ನು ಹೇಳುವುದು, ಒಳಿತನ್ನು ಆದೇಶಿಸುವುದು, ಕೆಡುಕನ್ನು ವಿರೋಧಿಸುವುದು, ಜನರಲ್ಲಿ ಸುಧಾರಣೆ ಮಾಡುವುದು ಇತ್ಯಾದಿ. ಯಾರಿಗೆ ಇವುಗಳನ್ನು ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಮೌನವಾಗಿದ್ದು ಇತರರಿಗೆ ತೊಂದರೆ ಕೊಡದೆ ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
ಎರಡನೆಯದು: ನೆರೆಹೊರೆಯವರನ್ನು ಗೌರವಿಸುವುದು. ಅಂದರೆ ಅವರಿಗೆ ಸಹಾಯ ಮಾಡುವುದು ಮತ್ತು ತೊಂದರೆ ಕೊಡದಿರುವುದು.
ಮೂರನೆಯದು: ತಮ್ಮನ್ನು ಭೇಟಿ ಮಾಡಲು ಆಗಮಿಸುವ ಅತಿಥಿಗಳನ್ನು ಗೌರವಿಸುವುದು. ಅಂದರೆ ಅವರೊಡನೆ ಉತ್ತಮ ಮಾತುಗಳನ್ನಾಡುವುದು, ಆಹಾರ ನೀಡುವುದು ಇತ್ಯಾದಿ.
Benefits
ನಾಲಿಗೆಯ ವಿಪತ್ತುಗಳ ಬಗ್ಗೆ ಈ ಹದೀಸಿನಲ್ಲಿ ಎಚ್ಚರಿಸಲಾಗಿದೆ.
ಇಸ್ಲಾಂ ಧರ್ಮವು ಅನ್ಯೋನ್ಯತೆ ಮತ್ತು ಉದಾರತೆಯ ಧರ್ಮವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
ಈ ಲಕ್ಷಣಗಳು ಸತ್ಯವಿಶ್ವಾಸದ ಶಾಖೆಗಳು ಮತ್ತು ಪ್ರಶಂಸನೀಯ ಶಿಷ್ಟಾಚಾರಗಳಲ್ಲಿ ಸೇರಿದ್ದಾಗಿವೆ.
ಹೆಚ್ಚು ಮಾತನಾಡುವುದು ಅಸಹ್ಯಪಡಲಾದ (ಮಕ್ರೂಹ್) ಅಥವಾ ನಿಷೇಧಿಸಲಾದ (ಹರಾಮ್) ಕೃತ್ಯಗಳನ್ನು ಮಾಡಲು ಕಾರಣವಾಗಬಹುದು. ಸತ್ಕರ್ಮಗಳಲ್ಲದ ಇತರ ವಿಷಯಗಳಲ್ಲಿ ಮೌನವಾಗಿರುವುದೇ ಸುರಕ್ಷತೆಯಾಗಿದೆ.
Attribution
Categories
Share hadeeth
Sharing options · 0 Total shares

