ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಗಳಿವೆ." ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು ಎಂದು ಕೇಳಲಾಯಿತು. ಅವರು ಉತ್ತರಿಸಿದರು: "ನೀನು ಅವನನ್ನು ಭೇಟಿಯಾದರೆ, ಅವನಿಗೆ ಸಲಾಂ ಹೇಳುವುದು; ಅವನು ನಿನ್ನನ್ನು ಆಹ್ವಾನಿಸಿದರೆ, ಅವನ ಆಹ್ವಾನವನ್ನು ಸ್ವೀಕರಿಸುವುದು; ಅವನು ನಿನ್ನಲ್ಲಿ ಸಲಹೆ ಕೇಳಿದರೆ, ಅವನಿಗೆ ಸಲಹೆ ನೀಡುವುದು; ಅವನು ಸೀನಿದ ನಂತರ ಅಲ್ಲಾಹನನ್ನು ಸ್ತುತಿಸಿದರೆ, ಅವನಿಗೆ ತಸ್ಮೀತ್ ಮಾಡುವುದು; ಅವನು ಅನಾರೋಗ್ಯಕ್ಕೆ ಒಳಗಾದಾಗ, ಅವನನ್ನು ಸಂದರ್ಶಿಸುವುದು; ಮತ್ತು ಅವನು ನಿಧನನಾದರೆ ಅವನ ಮೃತದೇಹವನ್ನು ಹಿಂಬಾಲಿಸುವುದು
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸ್ಲಿಮನಿಗೆ ಇನ್ನೊಬ್ಬ ಮುಸ್ಲಿಮನ ಮೇಲೆ ಆರು ಹಕ್ಕುಗಳಿವೆ." ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು ಎಂದು ಕೇಳಲಾಯಿತು. ಅವರು ಉತ್ತರಿಸಿದರು: "ನೀನು ಅವನನ್ನು ಭೇಟಿಯಾದರೆ, ಅವನಿಗೆ ಸಲಾಂ ಹೇಳುವುದು; ಅವನು ನಿನ್ನನ್ನು ಆಹ್ವಾನಿಸಿದರೆ, ಅವನ ಆಹ್ವಾನವನ್ನು ಸ್ವೀಕರಿಸುವುದು; ಅವನು ನಿನ್ನಲ್ಲಿ ಸಲಹೆ ಕೇಳಿದರೆ, ಅವನಿಗೆ ಸಲಹೆ ನೀಡುವುದು; ಅವನು ಸೀನಿದ ನಂತರ ಅಲ್ಲಾಹನನ್ನು ಸ್ತುತಿಸಿದರೆ, ಅವನಿಗೆ ತಸ್ಮೀತ್ ಮಾಡುವುದು; ಅವನು ಅನಾರೋಗ್ಯಕ್ಕೆ ಒಳಗಾದಾಗ, ಅವನನ್ನು ಸಂದರ್ಶಿಸುವುದು; ಮತ್ತು ಅವನು ನಿಧನನಾದರೆ ಅವನ ಮೃತದೇಹವನ್ನು ಹಿಂಬಾಲಿಸುವುದು."
Explanation
Benefits
ಒಂಟಿಯಾಗಿರುವ ಮುಸ್ಲಿಮನಿಗೆ ಯಾರಾದರೂ ಸಲಾಂ ಹೇಳಿದರೆ ಸಲಾಂಗೆ ಉತ್ತರಿಸುವುದು ವೈಯುಕ್ತಿಕ ಕಡ್ಡಾಯವಾಗಿದೆ. ಆದರೆ ಒಂದು ಗುಂಪು ಜನರಿಗೆ ಸಲಾಂ ಹೇಳಿದರೆ, ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡಿದರೆ ಸಾಕು. ಮುಂದಾಗಿಯೇ ಸಲಾಂ ಹೇಳುವುದು ಮೂಲಭೂತವಾಗಿ ಸುನ್ನತ್ ಆಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಮುಸ್ಲಿಮನನ್ನು ಸಂದರ್ಶಿಸುವುದು ಇತರ ಮುಸ್ಲಿಮರು ಪೂರೈಸಬೇಕಾದ ಅವನ ಹಕ್ಕಾಗಿದೆ. ಏಕೆಂದರೆ ಅದು ಅವನ ಹೃದಯಕ್ಕೆ ಸಂತೋಷ ಮತ್ತು ಸಮಾಧಾನವನ್ನು ತರುತ್ತದೆ. ಇದು ಸಾಮಾಜಿಕ ಬಾಧ್ಯತೆಯಾಗಿದೆ.
ಪಾಪವನ್ನು ಒಳಗೊಂಡಿರದಿದ್ದರೆ ಆಮಂತ್ರಣವನ್ನು ಸ್ವೀಕರಿಸುವುದು ಕಡ್ಡಾಯವಾಗಿದೆ. ಆಮಂತ್ರಣವು ಮದುವೆಯ ಔತಣಕೂಟಕ್ಕಾಗಿದ್ದರೆ, ಧಾರ್ಮಿಕವಾದ ಸಕಾರಣವಿಲ್ಲದಿದ್ದರೆ ಆಮಂತ್ರಣವನ್ನು ತಿರಸ್ಕರಿಸಬಾರದು ಎಂದು ಬಹುಪಾಲು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದಾಗ್ಯೂ, ಮದುವೆಯ ಔತಣಕೂಟವಲ್ಲದೆ ಇತರ ಸಮಾರಂಭಗಳಿಗೆ ಆಮಂತ್ರಿಸಿದರೆ, ಅದನ್ನು ಸ್ವೀಕರಿಸುವುದು ಅಪೇಕ್ಷಣೀಯವೆಂದು ಬಹುಪಾಲು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಸೀನಿದವನು ಅಲ್ಲಾಹನನ್ನು ಸ್ತುತಿಸಿದ್ದನ್ನು ಕೇಳುವವವರು ಅವನಿಗೆ ತಶ್ಮೀತ್ ಹೇಳುವುದು ಕಡ್ಡಾಯವಾಗಿದೆ.
ಇಸ್ಲಾಮಿ ಧರ್ಮಶಾಸ್ತ್ರದ ಸಂಪೂರ್ಣತೆ ಮತ್ತು ಸಮಾಜ ಹಾಗೂ ವಿಶ್ವಾಸದ ಬಂಧಗಳನ್ನು ಬಲಪಡಿಸಲು ಹಾಗೂ ಸಮಾಜದ ಸದಸ್ಯರ ನಡುವೆ ಪ್ರೀತಿಯ ಬಾಂಧವ್ಯವನ್ನು ಬೆಸೆಯಲು ಅದು ನೀಡುವ ಪ್ರೇರಣೆಯನ್ನು ತಿಳಿಸಲಾಗಿದೆ.
"ಅವನಿಗೆ ತಸ್ಮೀತ್ ಮಾಡುವುದು" ಮತ್ತು ಕೆಲವು ವರದಿಗಳಲ್ಲಿ "ಅವನಿಗೆ ತಶ್ಮೀತ್ ಮಾಡುವುದು"ಎಂದು ಬಂದಿದೆ. ಇದರ ಅರ್ಥ ಒಳಿತು ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವುದು. "ತಶ್ಮೀತ್" ಎಂದರೆ ಅಲ್ಲಾಹು ನಿಮ್ಮನ್ನು ದುಃಖದಿಂದ ದೂರವಿಡಲಿ ಮತ್ತು ನಿಮ್ಮ ಶತ್ರು ನಿಮ್ಮ ಬಗ್ಗೆ ಸಂತೋಷಪಡಲು ಕಾರಣವಾಗುವುದರಿಂದ ನಿಮ್ಮನ್ನು ರಕ್ಷಿಸಲಿ ಎಂದು ಅರ್ಥ ನೀಡಲಾಗಿದೆ. "ತಸ್ಮೀತ್" ಎಂದರೆ, ಅಲ್ಲಾಹು ನಿಮ್ಮನ್ನು ನೇರ ಮಾರ್ಗಕ್ಕೆ ಮಾರ್ಗದರ್ಶನ ನೀಡಲಿ ಎಂದು ಅರ್ಥ ನೀಡಲಾಗಿದೆ.
Attribution
Categories
Share hadeeth
Sharing options · 0 Total shares

