ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ (ಹೆಚ್ಚು ತಿನ್ನುವುದು) ಅನಿವಾರ್ಯವಾದರೆ, (ಅವನ ಹೊಟ್ಟೆಯ) ಮೂರನೇ ಒಂದು ಭಾಗವು ಅವನ ಆಹಾರಕ್ಕಾಗಿ, ಮೂರನೇ ಒಂದು ಭಾಗವು ಅವನ ಪಾನೀಯಕ್ಕಾಗಿ, ಮತ್ತು ಮೂರನೇ ಒಂದು ಭಾಗವು ಅವನ ಉಸಿರಾಟಕ್ಕಾಗಿ (ಇರಲಿ)
Choose an available translation of this Hadeeth
Hadeeth text
ಅಲ್-ಮಿಖ್ದಾಮ್ ಇಬ್ನ್ ಮಅದೀ ಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆದಮರ ಮಗನು (ಮನುಷ್ಯನು) ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ತುಂಬಲಿಲ್ಲ. ಆದಮರ ಮಗನಿಗೆ ಅವನ ಬೆನ್ನು ನೇರವಾಗಿಡಲು ಕೆಲವು ತುತ್ತುಗಳು ಸಾಕಾಗುತ್ತವೆ. ಒಂದು ವೇಳೆ (ಹೆಚ್ಚು ತಿನ್ನುವುದು) ಅನಿವಾರ್ಯವಾದರೆ, (ಅವನ ಹೊಟ್ಟೆಯ) ಮೂರನೇ ಒಂದು ಭಾಗವು ಅವನ ಆಹಾರಕ್ಕಾಗಿ, ಮೂರನೇ ಒಂದು ಭಾಗವು ಅವನ ಪಾನೀಯಕ್ಕಾಗಿ, ಮತ್ತು ಮೂರನೇ ಒಂದು ಭಾಗವು ಅವನ ಉಸಿರಾಟಕ್ಕಾಗಿ (ಇರಲಿ)".
Explanation
Benefits
ತಿನ್ನುವುದರ ಉದ್ದೇಶ, ಆರೋಗ್ಯ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದು ಮತ್ತು ಅವುಗಳ ಮೂಲಕ ಜೀವನದ ಸುಸ್ಥಿತಿಯನ್ನು ಕಾಪಾಡಿಕೊಳ್ಳುವುದಾಗಿದೆ.
ಹೊಟ್ಟೆಯನ್ನು ಆಹಾರದಿಂದ ತುಂಬಿಸುವುದರಿಂದ ದೈಹಿಕ ಮತ್ತು ಧಾರ್ಮಿಕ ಹಾನಿಗಳಿವೆ. ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಅತಿಯಾಗಿ ತಿನ್ನುವುದರ ಬಗ್ಗೆ ಎಚ್ಚರವಾಗಿರಿ. ಏಕೆಂದರೆ ಅದು ದೇಹವನ್ನು ಹಾಳು ಮಾಡುತ್ತದೆ ಮತ್ತು ನಮಾಝ್ನ ಬಗ್ಗೆ ಸೋಮಾರಿತನ ಉಂಟುಮಾಡುತ್ತದೆ."
ನಿಯಮದ ದೃಷ್ಟಿಯಿಂದ ನೋಡುವಾಗ ತಿನ್ನುವುದರಲ್ಲಿ ಹಲವು ವಿಧಗಳಿವೆ: ವಾಜಿಬ್ (ಕಡ್ಡಾಯ): ಜೀವವನ್ನು ಉಳಿಸಲು ಬೇಕಾದಷ್ಟು ತಿನ್ನುವುದು. ಅದನ್ನು ಬಿಟ್ಟರೆ (ದೇಹಕ್ಕೆ) ಹಾನಿಯುಂಟಾಗುತ್ತದೆ. ಜಾಯಿಝ್ (ಅನುಮತಿಸಲ್ಪಟ್ಟದ್ದು): ಕಡ್ಡಾಯದ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚು. ಆದರೆ ಅದರಿಂದ ಹಾನಿಯಾಗುವ ಭಯವಿರಬಾರದು. ಮಕ್ರೂಹ್ (ಅನಪೇಕ್ಷಿತ): ಅದರಿಂದ ಹಾನಿಯಾಗುವ ಭಯವಿರುವುದು. ಮುಹರ್ರಮ್ (ನಿಷಿದ್ಧ): ಅದರಿಂದ ಹಾನಿಯಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿದಿರುವುದು. ಮುಸ್ತಹಬ್ (ಅಪೇಕ್ಷಿತ): ಅಲ್ಲಾಹನ ಆರಾಧನೆ ಮತ್ತು ವಿಧೇಯತೆಗೆ ಸಹಾಯವಾಗುವಷ್ಟು (ತಿನ್ನುವುದು). ಈ ಹದೀಸ್ನಲ್ಲಿ ಇವುಗಳನ್ನು ಮೂರು ದರ್ಜೆಗಳಲ್ಲಿ ಸಂಕ್ಷಿಪ್ತಗೊಳಿಸಲಾಗಿದೆ: ಮೊದಲನೆಯದು: ಹೊಟ್ಟೆಯನ್ನು ತುಂಬಿಸುವುದು. ಎರಡನೆಯದು: ಬೆನ್ನು ನೇರವಾಗಿಡಲು ಕೆಲವು ತುತ್ತುಗಳು. ಮೂರನೆಯದು: "ಮೂರನೇ ಒಂದು ಭಾಗ ಆಹಾರಕ್ಕೆ, ಮೂರನೇ ಒಂದು ಭಾಗ ಪಾನೀಯಕ್ಕೆ ಮತ್ತು ಮೂರನೇ ಒಂದು ಭಾಗ ಉಸಿರಾಟಕ್ಕೆ" ಎಂದು ಹೇಳಿರುವುದು. ಇವೆಲ್ಲವೂ, ತಿನ್ನುವ ವಸ್ತು ಹಲಾಲ್ ಆಗಿದ್ದರೆ (ಮಾತ್ರ ಅನ್ವಯಿಸುತ್ತದೆ).
ಈ ಹದೀಸ್ ವೈದ್ಯಶಾಸ್ತ್ರದ ನಿಯಮಗಳಲ್ಲಿ ಒಂದು ನಿಯಮವಾಗಿದೆ. ಏಕೆಂದರೆ, ವೈದ್ಯಕೀಯ ವಿಜ್ಞಾನವು ಮೂರು ತತ್ವಗಳ ಮೇಲೆ ಆಧಾರಿತವಾಗಿದೆ: ಶಕ್ತಿಯನ್ನು ಕಾಪಾಡುವುದು, ಪಥ್ಯ, ಮತ್ತು ವಿಸರ್ಜನೆ. ಈ ಹದೀಸ್ ಇವುಗಳಲ್ಲಿ ಮೊದಲ ಎರಡನ್ನು ಒಳಗೊಂಡಿದೆ. ಸರ್ವಶಕ್ತನಾದ ಅಲ್ಲಾಹನ ವಚನದಲ್ಲಿ ಹೀಗೆ ಬಂದಿದೆ: "ಮತ್ತು ತಿನ್ನಿರಿ ಹಾಗೂ ಕುಡಿಯಿರಿ, ಆದರೆ ಮಿತಿಮೀರಬೇಡಿ. ಖಂಡಿತವಾಗಿಯೂ ಮಿತಿಮೀರುವವರನ್ನು ಅವನು ಇಷ್ಟಪಡುವುದಿಲ್ಲ." [ಸೂರಃ ಅಲ್-ಅಅರಾಫ್: 31].
ಈ ಶರೀಅತ್ನ ಪರಿಪೂರ್ಣತೆಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ ಅದು (ಶರೀಅತ್) ಮನುಷ್ಯನ ಧಾರ್ಮಿಕ ಮತ್ತು ಲೌಕಿಕ ಹಿತಾಸಕ್ತಿಗಳನ್ನು ಒಳಗೊಂಡಿದೆ.
ಶರೀಅತ್ನ ಜ್ಞಾನಗಳಲ್ಲಿ ವೈದ್ಯಶಾಸ್ತ್ರದ ಮೂಲತತ್ವಗಳು ಮತ್ತು ಅದರ ಕೆಲವು ವಿಧಗಳೂ ಸೇರಿವೆ. ಉದಾಹರಣೆಗೆ ಜೇನುತುಪ್ಪ ಮತ್ತು ಕಪ್ಪು ಜೀರಿಗೆಯ ಬಗ್ಗೆ ಬಂದಿರುವ ಹದೀಸ್ಗಳು.
ಶರೀಅತ್ನ ನಿಯಮಗಳು ವಿವೇಕವನ್ನು ಒಳಗೊಂಡಿವೆ. ಅವು ಕೆಡುಕುಗಳನ್ನು ತಡೆಯುವುದು ಮತ್ತು ಒಳಿತುಗಳನ್ನು ತರುವುದರ ಮೇಲೆ ಆಧಾರಿತವಾಗಿವೆ.
Attribution
Categories
Share hadeeth
Sharing options · 0 Total shares

