ಖಂಡಿತವಾಗಿಯೂ ಯಾವ ಆಹಾರದ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವುದಿಲ್ಲವೋ ಅದನ್ನು ಶೈತಾನನು ತನಗಾಗಿ ಹಲಾಲ್ ಮಾಡಿಕೊಳ್ಳುತ್ತಾನೆ
Choose an available translation of this Hadeeth
Hadeeth text
ಹುದೈಫಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಊಟಕ್ಕೆ ಹಾಜರಾದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಊಟ ಮಾಡಲು) ಪ್ರಾರಂಭಿಸಿ ತಮ್ಮ ಕೈಯನ್ನು (ಊಟದಲ್ಲಿ) ಇಡುವವರೆಗೆ ನಾವು ನಮ್ಮ ಕೈಗಳನ್ನು ಇಡುತ್ತಿರಲಿಲ್ಲ. ಒಮ್ಮೆ ನಾವು ಅವರೊಂದಿಗೆ ಊಟಕ್ಕೆ ಹಾಜರಾಗಿದ್ದೆವು. ಆಗ ಒಬ್ಬ ಹುಡುಗಿ ಯಾರೋ ದೂಡಿದಂತೆ (ವೇಗವಾಗಿ) ಬಂದು, ತನ್ನ ಕೈಯನ್ನು ಊಟದಲ್ಲಿಡಲು ಹೋದಳು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಳ ಕೈಯನ್ನು ಹಿಡಿದರು. ನಂತರ ಒಬ್ಬ ಮರುಭೂಮಿ ನಿವಾಸಿ ಅರಬ್ಬಿ ಯಾರೋ ದೂಡಿದಂತೆ ಬಂದನು. ಆಗ ಅವರು (ಪ್ರವಾದಿ) ಅವನ ಕೈಯನ್ನೂ ಹಿಡಿದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಯಾವ ಆಹಾರದ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವುದಿಲ್ಲವೋ ಅದನ್ನು ಶೈತಾನನು ತನಗಾಗಿ ಹಲಾಲ್ ಮಾಡಿಕೊಳ್ಳುತ್ತಾನೆ (ಅಂದರೆ, ಅದರಲ್ಲಿ ಪಾಲ್ಗೊಳ್ಳುತ್ತಾನೆ). ಅವನು ಈ ಹುಡುಗಿಯ ಮೂಲಕ (ಆಹಾರವನ್ನು) ಹಲಾಲ್ ಮಾಡಿಕೊಳ್ಳಲು ಅವಳನ್ನು ಕರೆತಂದನು. ಆಗ ನಾನು ಅವಳ ಕೈಯನ್ನು ಹಿಡಿದೆನು. ನಂತರ ಅವನು ಈ ಮರುಭೂಮಿ ನಿವಾಸಿಯ ಮೂಲಕ (ಆಹಾರವನ್ನು) ಹಲಾಲ್ ಮಾಡಿಕೊಳ್ಳಲು ಅವನನ್ನು ಕರೆತಂದನು, ಆಗ ನಾನು ಅವನ ಕೈಯನ್ನೂ ಹಿಡಿದೆನು. ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ, ಖಂಡಿತವಾಗಿಯೂ ಅವನ (ಶೈತಾನನ) ಕೈ ಅವಳ ಕೈಯೊಂದಿಗೆ ನನ್ನ ಕೈಯಲ್ಲಿದೆ".
Explanation
Benefits
ಊಟದ ಶಿಷ್ಟಾಚಾರಗಳಲ್ಲಿ ಒಂದು ಏನೆಂದರೆ, ಹಿರಿಯರು ಮತ್ತು ಶ್ರೇಷ್ಠರು ಊಟವನ್ನು ಪ್ರಾರಂಭಿಸುವವರೆಗೆ ಕಿರಿಯರು ಕಾಯುವುದು.
ಶೈತಾನನು ತಾನು ಇಷ್ಟಪಡುವ ಕಾರ್ಯಗಳನ್ನು ಮಾಡಲು ಕೆಲವು ಅಲಕ್ಷ್ಯರಾದ ಜನರನ್ನು ಉತ್ತೇಜಿಸುತ್ತಾನೆ. ಇದರಿಂದ ಅವನು ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಹದೀಸ್ನಲ್ಲಿರುವುದು ಅದಕ್ಕೆ ಒಂದು ಉದಾಹರಣೆಯಾಗಿದೆ.
ಇಮಾಮ್ ನವವಿ ಹೇಳುತ್ತಾರೆ: ವಿದ್ವಾಂಸರು ಹೇಳುತ್ತಾರೆ: (ಊಟದ ಆರಂಭದಲ್ಲಿ) ಗಟ್ಟಿಯಾಗಿ ಬಿಸ್ಮಿಲ್ಲಾಹ್ ಎಂದು ಹೇಳುವುದು ಅಪೇಕ್ಷಣೀಯವಾಗಿದೆ. ಇತರರಿಗೆ ಕೇಳುವಂತೆ ಮತ್ತು ಅವರಿಗೆ ನೆನಪಿಸುವಂತೆ ಮಾಡುವುದಕ್ಕಾಗಿ.
ಒಬ್ಬನು ಊಟ ಮಾಡಲು ಬಂದು, ಅವನು 'ಬಿಸ್ಮಿಲ್ಲಾಹ್' ಹೇಳಿದ್ದನ್ನು ನೀವು ಕೇಳದಿದ್ದರೆ, ಅವನು ಹೇಳುವವರೆಗೆ ಅವನ ಕೈಯನ್ನು ಹಿಡಿಯಬೇಕೆಂದು ತಿಳಿಸಲಾಗಿದೆ.
ವಿದ್ವಾಂಸರು ಕೆಡುಕನ್ನು ತಡೆಗಟ್ಟುವುದು ಕಡ್ಡಾಯವಾಗಿದೆ. ಸಾಮರ್ಥ್ಯವಿರುವವನು ತನ್ನ ಕೈಯಿಂದ ಕೆಡುಕನ್ನು ತಡೆಗಟ್ಟಬೇಕಾಗಿದೆ.
ಈ ಹದೀಸ್ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿದ ಪವಾಡಗಳಲ್ಲಿ ಒಂದಾಗಿದೆ. ಈ ಘಟನೆಯಲ್ಲಿರುವುದನ್ನು ಅಲ್ಲಾಹು ಅವರಿಗೆ ತಿಳಿಸಿರುವುದು ಒಂದು ಪವಾಡವಾಗಿದೆ.
ಸತ್ಯವಿಶ್ವಾಸಿಗಳು ಅಲ್ಲಾಹನ ಹೆಸರನ್ನು ಉಚ್ಚರಿಸದಿದ್ದರೆ ಹೊರತು ಅವರ ಆಹಾರದಲ್ಲಿ ಪಾಲ್ಗೊಳ್ಳಲು ಶೈತಾನನಿಗೆ ಸಾಧ್ಯವಿಲ್ಲ.
ಊಟ ಮತ್ತು ಪಾನೀಯದ ವಿಷಯದಲ್ಲಿ ಜನರಿಗೆ ಇಸ್ಲಾಮಿನ ಶಿಷ್ಟಾಚಾರವನ್ನು ಕಲಿಸುವುದು ಅಪೇಕ್ಷಣೀಯವಾಗಿದೆ.
ಕೇಳುಗನಿಗೆ ವಿಷಯವನ್ನು ಒತ್ತಿಹೇಳಲು ಪ್ರಮಾಣ ಮಾಡುವುದು ಅಪೇಕ್ಷಣೀಯವಾಗಿದೆ.
ಇಮಾಮ್ ನವವಿ ಹೇಳುತ್ತಾರೆ: "ನೀರು, ಹಾಲು, ಜೇನುತುಪ್ಪ, ಮದ್ದು ಮತ್ತು ಇತರ ಎಲ್ಲಾ ಪಾನೀಯಗಳನ್ನು ಕುಡಿಯುವಾಗ 'ಬಿಸ್ಮಿಲ್ಲಾ' ಹೇಳುವುದು ಊಟದ ಸಂದರ್ಭ 'ಬಿಸ್ಮಿಲ್ಲಾ' ಹೇಳುವಂತೆಯೇ ಆಗಿದೆ."
ಇಮಾಮ್ ನವವಿ ಹೇಳುತ್ತಾರೆ: ಒಬ್ಬನು ಊಟದ ಆರಂಭದಲ್ಲಿ ಉದ್ದೇಶಪೂರ್ವಕವಾಗಿ, ಮರೆವಿನಿಂದ, ಅಜ್ಞಾನದಿಂದ, ಬಲವಂತದಿಂದ ಅಥವಾ ಬೇರೆ ಯಾವುದೇ ಅಡ್ಡಿಯಿಂದ 'ಬಿಸ್ಮಿಲ್ಲಾ' ಹೇಳುವುದನ್ನು ಬಿಟ್ಟು, ನಂತರ ಊಟದ ಮಧ್ಯದಲ್ಲಿ ಅವನಿಗೆ ಅದನ್ನು ಹೇಳಲು ಸಾಧ್ಯವಾದರೆ, "ಬಿಸ್ಮಿಲ್ಲಾಹಿ ಅವ್ವಲಹು ವ ಆಖಿರಹು" (ಅಲ್ಲಾಹನ ಹೆಸರಿನಿಂದ, ಅದರ ಆರಂಭ ಮತ್ತು ಅದರ ಅಂತ್ಯ) ಎಂದು ಹೇಳುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ಊಟ ಮಾಡಿದಾಗ, ಅವನು ಅಲ್ಲಾಹನ ಹೆಸರನ್ನು ಉಚ್ಚರಿಸಲಿ. ಒಂದು ವೇಳೆ ಅವನು ಆರಂಭದಲ್ಲಿ ಅಲ್ಲಾಹನ ಹೆಸರನ್ನು ಉಚ್ಚರಿಸಲು ಮರೆತರೆ, ಅವನು 'ಬಿಸ್ಮಿಲ್ಲಾಹಿ ಅವ್ವಲಹು ವ ಆಖಿರಹು' ಎಂದು ಹೇಳಲಿ". (ಅಬೂ ದಾವೂದ್ ಮತ್ತು ತಿರ್ಮಿದಿ).
Attribution
Categories
Share hadeeth
Sharing options · 0 Total shares

