افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#3313[صحيح]
HadeethEnc · 1.36.0

ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ

Available translations

Choose an available translation of this Hadeeth

01

Hadeeth text

ಉಸ್ಮಾನ್ ಬಿನ್ ಅಫ್ಫಾನ್ ರವರ ವಿಮೋಚಿತ ಗುಲಾಮರಾದ ಹುಮ್ರಾನ್ ರಿಂದ ವರದಿ: ಒಮ್ಮೆ ಉಸ್ಮಾನ್ ಬಿನ್ ಅಫ್ಫಾನ್ ವುದೂ ನಿರ್ವಹಿಸಲು ನೀರು ತರಿಸುವುದನ್ನು ಅವರು ಕಂಡರು. ಅವರು (ಉಸ್ಮಾನ್) ಪಾತ್ರೆಯಿಂದ ತಮ್ಮ ಎರಡು ಕೈಗಳಿಗೆ ನೀರು ಸುರಿದು, ಅವುಗಳನ್ನು ಮೂರು ಬಾರಿ ತೊಳೆದರು. ನಂತರ ಬಲಗೈಯನ್ನು ನೀರಿಗೆ ತೂರಿಸಿದರು. ನಂತರ ಬಾಯಿ ಮುಕ್ಕಳಿಸಿ ಮೂಗಿಗೆ ನೀರೆಳೆದು ಹೊರಬಿಟ್ಟರು. ನಂತರ ಮೂರು ಬಾರಿ ಮುಖವನ್ನು ತೊಳೆದರು. ಮೊಣಕೈಗಳ ವರೆಗೆ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ತಲೆಯನ್ನು ಸವರಿದರು. ನಂತರ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು. ನಂತರ ಹೇಳಿದರು: "ನಾನಿಲ್ಲಿ ವುದೂ ನಿರ್ವಹಿಸಿದಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸುವುದನ್ನು ನಾನು ಕಂಡಿದ್ದೇನೆ." ಅವರು (ಪ್ರವಾದಿಯವರು) ಹೇಳಿದರು: "ಯಾರು ನಾನಿಲ್ಲಿ ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ, ಇಹಲೋಕದ ಯಾವುದೇ ವಿಷಯದ ಬಗ್ಗೆ ಏನೂ ಯೋಚಿಸದೆ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ ಅವರ ಗತ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆ."
02

Explanation

ಜನರಿಗೆ ಸ್ಪಷ್ಟವಾಗಿ ಅರ್ಥವಾಗುವುದಕ್ಕಾಗಿ ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದ ರೂಪವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟು ಕಲಿಸುತ್ತಿದ್ದಾರೆ. ಅವರು ಒಂದು ಪಾತ್ರೆಯಲ್ಲಿ ನೀರು ತರಿಸಿ, ಅದನ್ನು ತಮ್ಮ ಎರಡು ಕೈಗಳಿಗೆ ಮೂರು ಬಾರಿ ಸುರಿದರು. ನಂತರ ತಮ್ಮ ಬಲಗೈಯನ್ನು ಅದರಲ್ಲಿ ತೂರಿಸಿ, ಸ್ವಲ್ಪ ನೀರನ್ನು ತೆಗೆದು ಬಾಯಿಗೆ ಹಾಕಿ ಮುಕ್ಕಳಿಸಿ ಉಗಿದರು. ನಂತರ ಶ್ವಾಸದೊಂದಿಗೆ ನೀರನ್ನು ಮೂಗಿನೊಳಗೆ ಎಳೆದು ರಭಸವಾಗಿ ಹೊರಬಿಟ್ಟರು. ನಂತರ ಮುಖವನ್ನು ಮೂರು ಬಾರಿ ತೊಳೆದರು. ನಂತರ ಮೊಣಕೈಗಳನ್ನು ಸೇರಿಸಿ ಎರಡು ಕೈಗಳನ್ನು ಮೂರು ಬಾರಿ ತೊಳೆದರು. ನಂತರ ಕೈಯನ್ನು ಒದ್ದೆ ಮಾಡಿ ತಲೆಯನ್ನು ಒಂದು ಬಾರಿ ಸವರಿದರು. ನಂತರ ಕಾಲಿನ ಹರಡುಗಂಟುಗಳನ್ನು ಸೇರಿಸಿ ಎರಡು ಕಾಲುಗಳನ್ನು ಮೂರು ಬಾರಿ ತೊಳೆದರು.

ವುದೂ ಮುಗಿಸಿದ ನಂತರ, ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು, "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದೇ ರೀತಿ ವುದೂ ನಿರ್ವಹಿಸುವುದನ್ನು ನಾನು ನೋಡಿದ್ದೇನೆ" ಎಂದು ತಿಳಿಸಿದರು. ಯಾರು ಈ ರೀತಿ ವುದೂ ನಿರ್ವಹಿಸಿ, ವಿನಮ್ರತೆ ಮತ್ತು ಏಕಾಗ್ರತೆಯಿಂದ ಎರಡು ರಕಅತ್ ನಮಾಝ್ ನಿರ್ವಹಿಸುತ್ತಾರೋ, ಅವರಿಗೆ ಈ ಪೂರ್ಣ ರೂಪದ ವುದೂ ಮತ್ತು ಈ ನಿಷ್ಕಳಂಕವಾದ ನಮಾಝ್ ನಿರ್ವಹಿಸಿದ್ದಕ್ಕೆ ಪ್ರತಿಫಲವಾಗಿ ಅಲ್ಲಾಹು ಅವರ ಗತಪಾಪಗಳನ್ನು ಕ್ಷಮಿಸುತ್ತಾನೆಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಭವಾರ್ತೆಯನ್ನು ಕೂಡ ಅವರು ಜನರಿಗೆ ತಿಳಿಸಿದರು.
03

Benefits

ವುದೂ ಪ್ರಾರಂಭಿಸುವಾಗ ಕೈಗಳನ್ನು ಪಾತ್ರೆಗೆ ತೂರಿಸುವ ಮೊದಲು ಅವುಗಳನ್ನು ತೊಳೆಯುವುದು ಅಪೇಕ್ಷಣೀಯವಾಗಿದೆ. ಅದು ನಿದ್ದೆಯಿಂದ ಎದ್ದ ಸಂದರ್ಭವಲ್ಲದಿದ್ದರೂ ಸಹ. ನಿದ್ದೆಯಿಂದ ಎದ್ದ ಸಂದರ್ಭವಾಗಿದ್ದರೆ, ಕೈಗಳನ್ನು ತೊಳೆಯುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳು ವಿಷಯವನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಲು ಮತ್ತು ಆ ಜ್ಞಾನವು ಅವರಲ್ಲಿ ಸದಾ ಉಳಿದುಕೊಳ್ಳಲು ಅಧ್ಯಾಪಕರು ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ಮುಂತಾದ ಅತ್ಯಂತ ಪರಿಣಾಮಕಾರಿ ಮಾರ್ಗಗಳನ್ನು ಬಳಸಬೇಕು.
ನಮಾಝ್ ಮಾಡುವವರು (ನಮಾಝಿನ ಏಕಾಗ್ರತೆಗೆ ಭಂಗ ತರುವ) ಭೌತಿಕ ಆಲೋಚನೆಗಳಿಂದ ದೂರವಿರಬೇಕು. ಹೃದಯ ಸಾನಿಧ್ಯತೆಯಿಂದ ಮಾಡುವ ನಮಾಝ್ ಸಂಪೂರ್ಣ ಮತ್ತು ಪರಿಪೂರ್ಣವಾದ ನಮಾಝ್ ಆಗಿದೆ. ನಮಾಝ್ ಮಾಡುವಾಗ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾದರೂ, ಅದಕ್ಕಾಗಿ ಪರಿಶ್ರಮ ಪಡಬೇಕು. ಮನಸ್ಸನ್ನು ಆಲೋಚನೆಗಳಲ್ಲಿ ವಿಹರಿಸುವಂತೆ ಬಿಟ್ಟುಬಿಡಬಾರದು.
ವುದೂ ನಿರ್ವಹಿಸುವಾಗ ಬಲಭಾಗಕ್ಕೆ ಆದ್ಯತೆ ನೀಡುವುದು ಅಪೇಕ್ಷಣೀಯವಾಗಿದೆ.
ಬಾಯಿ ಮುಕ್ಕಳಿಸುವುದು, ಮೂಗಿಗೆ ನೀರೆಳೆಯುವುದು, ಮೂಗಿನಿಂದ ನೀರು ಹೊರಬಿಡುವುದು ಇವುಗಳನ್ನು ಅನುಕ್ರಮವಾಗಿ ನಿರ್ವಹಿಸಬೇಕು.
ಮುಖ, ಕೈ ಮತ್ತು ಕಾಲುಗಳನ್ನು ಮೂರು ಬಾರಿ ತೊಳೆಯುವುದು ಅಪೇಕ್ಷಣೀಯವಾಗಿದೆ. ಒಂದು ಬಾರಿ ತೊಳೆಯುವುದು ಕಡ್ಡಾಯವಾಗಿದೆ.
ಅಲ್ಲಾಹು ಗತಪಾಪಗಳನ್ನು ಕ್ಷಮಿಸಬೇಕಾದರೆ, ಹದೀಸಿನಲ್ಲಿ ವಿವರಿಸಲಾದ ರೀತಿಯಲ್ಲಿ ವುದೂ ನಿರ್ವಹಿಸುವುದು ಮತ್ತು ಎರಡು ರಕಅತ್ ನಮಾಝ್ ನಿರ್ವಹಿಸುವುದು ಎಂಬ ಎರಡು ವಿಷಯಗಳ ಪಾಲನೆಯಾಗಬೇಕು.
ವುದೂವಿನ ಪ್ರತಿಯೊಂದು ಅಂಗಕ್ಕೂ ಒಂದು ವ್ಯಾಪ್ತಿಯಿದೆ. ಮುಖದ ವ್ಯಾಪ್ತಿಯು ಹಣೆಯಲ್ಲಿ ಕೂದಲು ಬೆಳೆಯುವ ಸ್ಥಳದಿಂದ ತೊಡಗಿ ಗಡ್ಡ ಮತ್ತು ಗಲ್ಲದವರೆಗೆ ಲಂಬವಾಗಿ; ಮತ್ತು ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ ಅಡ್ಡವಾಗಿ. ಕೈಯ ವ್ಯಾಪ್ತಿಯು ಬೆರಳಿನ ತುದಿಗಳಿಂದ ಮೊಣಕೈಯವರೆಗೆ. ಮೊಣಕೈ ಎಂದರೆ ಕೈ ಮತ್ತು ತೋಳು ಜೋಡಣೆಯಾಗುವ ಸ್ಥಳ. ತಲೆಯ ವ್ಯಾಪ್ತಿಯು ಮುಖದ ಸುತ್ತಲೂ ಕೂದಲು ಬೆಳೆಯುವ ಸ್ಥಳದಿಂದ ತೊಡಗಿ ಕತ್ತಿನ ಮೇಲ್ಭಾಗದವರೆಗೆ. ಎರಡು ಕಿವಿಗಳನ್ನು ಸವರುವುದು ಇದರಲ್ಲಿ ಒಳಪಡುತ್ತದೆ. ಕಾಲಿನ ವ್ಯಾಪ್ತಿಯು ಪಾದ ಮತ್ತು ಕಣಕಾಲು ಜೋಡಣೆಯಾಗುವ ಹರಡುಗಂಟುಗಳು ಸೇರಿದಂತೆ ಸಂಪೂರ್ಣ ಪಾದ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...