افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#2984[صحيح]
HadeethEnc · 1.36.0

ಖಂಡಿತವಾಗಿಯೂ ಈ ಸಾಕುಪ್ರಾಣಿಗಳಿಗೆ ಕಾಡು ಮೃಗಗಳಂತೆಯೇ (ಕೆಲವೊಮ್ಮೆ) ಓಡಿಹೋಗುವ ಸ್ವಭಾವವಿರುತ್ತದೆ. ಆದ್ದರಿಂದ, ಅವುಗಳಲ್ಲಿ ಯಾವುದು ನಿಮ್ಮನ್ನು ಸೋಲಿಸುತ್ತದೆಯೋ (ನಿಮ್ಮ ಹಿಡಿತದಿಂದ ತಪ್ಪಿಸಿಕೊಳ್ಳುತ್ತದೆಯೋ), ಅದಕ್ಕೆ ಇದೇ ರೀತಿ ಮಾಡಿರಿ (ಅಂದರೆ, ಬಾಣದಿಂದ ಹೊಡೆದು ನಿಲ್ಲಿಸಬಹುದು)

Available translations

Choose an available translation of this Hadeeth

01

Hadeeth text

ರಾಫಿಅ್ ಬಿನ್ ಖದೀಜ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧುಲ್-ಹುಲೈಫಾದಲ್ಲಿದ್ದೆವು. ಆಗ ಜನರಿಗೆ ಹಸಿವಾಯಿತು. ಅವರು ಒಂಟೆಗಳು ಮತ್ತು ಕುರಿಗಳನ್ನು (ಯುದ್ಧದ ಸೊತ್ತಾಗಿ) ಪಡೆದರು. ವರದಿಗಾರರು ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರ ಹಿಂಭಾಗದಲ್ಲಿದ್ದರು. ಜನರು ಆತುರದಿಂದ, (ಕೆಲವು ಪ್ರಾಣಿಗಳನ್ನು) ಕೊಯ್ದು, ಅಡುಗೆ ಪಾತ್ರೆಗಳನ್ನು (ಒಲೆಯ ಮೇಲೆ) ಇಟ್ಟರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಾತ್ರೆಗಳ ಬಗ್ಗೆ ಆದೇಶಿಸಿದಾಗ ಅವುಗಳನ್ನು (ಅವುಗಳಲ್ಲಿದ್ದ ಸಾರಿನೊಂದಿಗೆ) ತಲೆಕೆಳಗು ಮಾಡಲಾಯಿತು. ನಂತರ ಅವರು (ಯುದ್ಧದ ಸೊತ್ತನ್ನು) ಹಂಚಿದರು. ಅವರು ಹತ್ತು ಕುರಿಗಳನ್ನು ಒಂದು ಒಂಟೆಗೆ ಸಮಾನವೆಂದು ಪರಿಗಣಿಸಿದರು. ಆಗ ಅವುಗಳಿಂದ ಒಂದು ಒಂಟೆ ತಪ್ಪಿಸಿಕೊಂಡು ಓಡಿಹೋಯಿತು. ಜನರು ಅದನ್ನು ಹುಡುಕಿದರು. ಆದರೆ ಅದು ಅವರನ್ನು ದಣಿಸಿತು (ಅವರಿಗೆ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ). ಜನರ ಬಳಿ ಕಡಿಮೆ ಕುದುರೆಗಳಿದ್ದವು. ಆಗ ಅವರಲ್ಲೊಬ್ಬ ವ್ಯಕ್ತಿ ಒಂದು ಬಾಣವನ್ನು ಅದರತ್ತ ಹೊಡೆದನು, ಆಗ ಅಲ್ಲಾಹು ಅದನ್ನು (ಆ ಬಾಣದ ಮೂಲಕ) ತಡೆಹಿಡಿದನು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಈ ಸಾಕುಪ್ರಾಣಿಗಳಿಗೆ ಕಾಡು ಮೃಗಗಳಂತೆಯೇ (ಕೆಲವೊಮ್ಮೆ) ಓಡಿಹೋಗುವ ಸ್ವಭಾವವಿರುತ್ತದೆ. ಆದ್ದರಿಂದ, ಅವುಗಳಲ್ಲಿ ಯಾವುದು ನಿಮ್ಮನ್ನು ಸೋಲಿಸುತ್ತದೆಯೋ (ನಿಮ್ಮ ಹಿಡಿತದಿಂದ ತಪ್ಪಿಸಿಕೊಳ್ಳುತ್ತದೆಯೋ), ಅದಕ್ಕೆ ಇದೇ ರೀತಿ ಮಾಡಿರಿ (ಅಂದರೆ, ಬಾಣದಿಂದ ಹೊಡೆದು ನಿಲ್ಲಿಸಬಹುದು)". (ರಾಫಿಅ್) ಹೇಳಿದರು: "ನಾವು ನಾಳೆ ಶತ್ರುವನ್ನು ಎದುರಿಸುವ ನಿರೀಕ್ಷೆಯಲ್ಲಿದ್ದೇವೆ - ಅಥವಾ ಭಯಪಡುತ್ತಿದ್ದೇವೆ - ನಮ್ಮ ಬಳಿ ಚೂರಿಗಳಿಲ್ಲ. ನಾವು ಬಿದಿರಿನ (ಚೂಪಾದ ತುಂಡು) ಗಳಿಂದ (ಪ್ರಾಣಿಗಳನ್ನು) ಕೊಯ್ಯಬಹುದೇ?". ಅವರು (ಪ್ರವಾದಿ) ಹೇಳಿದರು: "ಯಾವುದು ರಕ್ತವನ್ನು ಹರಿಸುತ್ತದೆಯೋ, ಮತ್ತು ಯಾವುದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗಿದೆಯೋ, ಅದನ್ನು ತಿನ್ನಿರಿ. ಹಲ್ಲು (ಮೂಳೆ) ಮತ್ತು ಉಗುರು ಆಗಿರಬಾರದು. ಅದರ ಬಗ್ಗೆ ನಾನು ನಿಮಗೆ ವಿವರಿಸುತ್ತೇನೆ: ಹಲ್ಲು, ಅದು ಮೂಳೆಯಾಗಿದೆ. ಮತ್ತು ಉಗುರು, ಅದು ಹಬಶಿಯರ (ಅಬಿಸೀನಿಯನ್ನರ) ಚೂರಿಯಾಗಿದೆ".
02

Explanation

ರಾಫಿಅ್ ಬಿನ್ ಖದೀಜ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧುಲ್-ಹುಲೈಫಾದಲ್ಲಿದ್ದರು. ಆಗ ಜನರಿಗೆ ಹಸಿವಾಯಿತು. ಅವರು ಬಹುದೇವಾರಾಧಕರಿಂದ ಒಂಟೆಗಳು ಮತ್ತು ಕುರಿಗಳನ್ನು ಯುದ್ಧದ ಸೊತ್ತಾಗಿ ಪಡೆದಿದ್ದರು. ಅವರು ಯುದ್ಧದ ಸೊತ್ತನ್ನು ಹಂಚುವ ಮೊದಲು ಆತುರಪಟ್ಟು, ಅದರಿಂದ (ಕೆಲವು ಪ್ರಾಣಿಗಳನ್ನು) ಕೊಯ್ದು, ಅಡುಗೆ ಪಾತ್ರೆಗಳನ್ನು ಇಟ್ಟರು. ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಮತಿ ಪಡೆಯಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರ ಹಿಂಭಾಗದಲ್ಲಿ ಸಾಗುತ್ತಿದ್ದರು. ಅವರಿಗೆ (ಈ ವಿಷಯ) ತಿಳಿದಾಗ, ಅವರು ಪಾತ್ರೆಗಳ ಬಗ್ಗೆ ಆದೇಶಿಸಿದರು. ಆಗ ಅವುಗಳಲ್ಲಿದ್ದ ಸಾರಿನೊಂದಿಗೆ ಅವುಗಳನ್ನು ತಲೆಕೆಳಗು ಮಾಡಲಾಯಿತು. ನಂತರ ಅವರು ಯುದ್ಧದ ಸೊತ್ತನ್ನು ಅವರ ನಡುವೆ ಹಂಚಿದರು. ಅವರು ಹತ್ತು ಕುರಿಗಳನ್ನು ಒಂದು ಒಂಟೆಗೆ ಸಮಾನವೆಂದು ನಿಗದಿಪಡಿಸಿದರು. ಆಗ ಅವುಗಳಿಂದ ಒಂದು ಒಂಟೆ ಓಡಿಹೋಯಿತು. ಅದನ್ನು ಹಿಂಬಾಲಿಸಲು ಮತ್ತು ಹಿಡಿಯಲು ಅವರಿಗೆ ಸಾಧ್ಯವಾಗಲಿಲ್ಲ. ಕುದುರೆಗಳು ಕಡಿಮೆಯಿದ್ದವು. ಆಗ ಅವರಲ್ಲೊಬ್ಬ ವ್ಯಕ್ತಿ ಅದರತ್ತ ಬಾಣವನ್ನು ಎಸೆದನು. ಆಗ ಅಲ್ಲಾಹು ಅದನ್ನು ಅವರಿಗಾಗಿ ತಡೆಹಿಡಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಖಂಡಿತವಾಗಿಯೂ ಈ ಸಾಕುಪ್ರಾಣಿಗಳಿಗೆ ಕಾಡು ಮೃಗಗಳಂತಹ ಸ್ವಭಾವಗಳಿರುತ್ತವೆ. ಅವುಗಳಲ್ಲಿ ಯಾವುದು ನಿಮ್ಮನ್ನು ಸೋಲಿಸುತ್ತದೆಯೋ ಮತ್ತು ನಿಮಗೆ ಹಿಡಿಯಲು ಸಾಧ್ಯವಾಗುವುದಿಲ್ಲವೋ, ಅದಕ್ಕೆ ಇದೇ ರೀತಿ ಮಾಡಿರಿ. ಆಗ ರಾಫಿಅ್ ಹೇಳಿದರು: ನಾವು ನಾಳೆ ಶತ್ರುವನ್ನು ಎದುರಿಸುವ ನಿರೀಕ್ಷೆಯಲ್ಲಿದ್ದೇವೆ ಮತ್ತು ನಾವು ಪ್ರಾಣಿಗಳನ್ನು ಕೊಯ್ಯುವುದರಿಂದ ನಮ್ಮ ಶಸ್ತ್ರಗಳ ಅಂಚಿಗೆ ಹಾನಿಯಾಗಬಹುದೆಂದು ನಾವು ಭಯಪಡುತ್ತೇವೆ. ಪ್ರಾಣಿಗಳನ್ನು ಕೊಯ್ಯುವುದು ಅತ್ಯಗತ್ಯವಾಗಿದೆ. ನಮ್ಮ ಬಳಿ ಅದಕ್ಕೆ ಚೂರಿಗಳಿಲ್ಲ. ನಾವು ಟೊಳ್ಳಾದ ಬಿದಿರಿನ ತುಂಡುಗಳಿಂದ ಕೊಯ್ಯಬಹುದೇ? ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಯಾವುದು ರಕ್ತವನ್ನು ಹೊರಹೊಮ್ಮಿಸುತ್ತದೆಯೋ ಮತ್ತು ಹರಿಸುತ್ತದೆಯೋ, ಮತ್ತು ಯಾವುದರ ಮೇಲೆ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗಿದೆಯೋ, ಅದನ್ನು ತಿನ್ನಿರಿ. ಅದು ಹಲ್ಲು ಮತ್ತು ಉಗುರು ಆಗಿರಬಾರದು. ಅದರ ಬಗ್ಗೆ ನಾನು ನಿಮಗೆ ವಿವರಿಸುತ್ತೇನೆ: ಹಲ್ಲು, ಅದು ಮೂಳೆಯಾಗಿದೆ. ಮತ್ತು ಉಗುರು, ಅದನ್ನು ಸತ್ಯನಿಷೇಧಿಗಳಾದ ಹಬಶಾದ ಜನರು ಬಳಸುತ್ತಾರೆ.
03

Benefits

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಮ್ರತೆಯ ಕೆಲವು ಅಂಶಗಳನ್ನು ತಿಳಿಸಲಾಗಿದೆ. ಅದೇನೆಂದರೆ, ಸೈನ್ಯದ ಹಿಂದೆ ನಡೆಯುವುದು, ತಮ್ಮ ಸಹಾಬಿಗಳ ಆರೈಕೆ ಮಾಡುವುದು, ಅವರನ್ನು ವಿಚಾರಿಸಿಕೊಳ್ಳುವುದು, ಮತ್ತು ತಮ್ಮ ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಸಲಹೆಯನ್ನು ಸ್ವೀಕರಿಸುವುದು.
ಆಡಳಿತಗಾರನು ತನ್ನ ಪ್ರಜೆಗಳು ಮತ್ತು ಸೈನಿಕರಿಗೆ ಶಿಸ್ತು ಕಲಿಸಬೇಕೆಂದು ತಿಳಿಸಲಾಗಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅನುಮತಿ ಪಡೆಯುವ ಮೊದಲು ಆತುರದಿಂದ ವರ್ತಿಸಿದ್ದಕ್ಕಾಗಿ ಅವರಿಗೆ ಶಿಸ್ತು ಕಲಿಸಿದರು. ಅವರ ಶಿಕ್ಷೆಯು ಅವರು ಬಯಸಿದ್ದರಿಂದ ವಂಚಿತರಾಗುವುದಾಗಿತ್ತು (ಅಂದರೆ, ಅವರು ಪಾತ್ರೆಯಲ್ಲಿದ್ದ ಮಾಂಸವನ್ನು ಕಳೆದುಕೊಂಡರು).
ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ರೀತಿಯನ್ನು ವಿವರಿಸಲಾಗಿದೆ.
ಯುದ್ಧದ ಸೊತ್ತನ್ನು (ಗನೀಮತ್) ಹಂಚುವ ಮೊದಲು ಅದರಿಂದ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ನ್ಯಾಯಪಾಲನೆ - ವಿಶೇಷವಾಗಿ ಶತ್ರುಗಳು ಮತ್ತು ಸತ್ಯನಿಷೇಧಿಗಳೊಂದಿಗೆ ಜಿಹಾದ್ ಮಾಡುವ ಸಂದರ್ಭದಲ್ಲಿ. ಏಕೆಂದರೆ ಅದು ವಿಜಯಿಗಳಾಗಲು ಮತ್ತು ಶತ್ರುಗಳ ಮೇಲೆ ಗೆಲುವು ಸಾಧಿಸಲು ಕಾರಣವಾಗುತ್ತದೆ.
ಇಮಾಮ್ ನವವಿ ಹೇಳುತ್ತಾರೆ: "ಒಂಟೆ, ಹಸು, ಕುದುರೆ ಅಥವಾ ಕುರಿ ಮುಂತಾದ ಸಾಕು ಪ್ರಾಣಿಗಳು ತಪ್ಪಿಸಿಕೊಂಡು ಓಡಿಹೋದರೆ ಅಥವಾ ವನ್ಯಮೃಗದಂತೆ ವರ್ತಿಸಿದರೆ, ಅದು ಬೇಟೆಯಂತೆಯೇ ಆಗುತ್ತದೆ. ಆಗ ಬಾಣದಿಂದ ಹೊಡೆಯುವ ಮೂಲಕ ಅದು ಹಲಾಲ್ ಆಗುತ್ತದೆ."
ಪ್ರಾಣಿಯನ್ನು ತಿನ್ನುವುದು ಹಲಾಲ್ ಆಗಲು ಅದನ್ನು ಕೊಯ್ಯುವುದು ಕಡ್ಡಾಯವಾಗಿದೆ. ಪ್ರಾಣಿಗೆ (ಈ ನಿಯಮ ಅನ್ವಯಿಸಲು) ಕೆಲವು ಶರತ್ತುಗಳಿವೆ: 1- ಅದನ್ನು ತಿನ್ನುವುದು ಅನುಮತಿಸಲ್ಪಟ್ಟಿರಬೇಕು, 2- ಅದು ನಿಯಂತ್ರಣದಲ್ಲಿರಬೇಕು. ನಿಯಂತ್ರಣದಲ್ಲಿಲ್ಲದ ಪ್ರಾಣಿಗೆ ಬೇಟೆಯ ನಿಯಮ ಅನ್ವಯಿಸುತ್ತದೆ. 3- ಅದು ಭೂಮಿಯ ಪ್ರಾಣಿಯಾಗಿರಬೇಕು; ಸಮುದ್ರದ ಪ್ರಾಣಿಗಳಿಗೆ ಕೊಯ್ಯುವುದು ಶರತ್ತಿಲ್ಲ.
ಸರಿಯಾದ ಕೊಯ್ಯುವಿಕೆಯ ಶರತ್ತುಗಳು: 1- ಕೊಯ್ಯುವವನ ಅರ್ಹತೆ – ಅವನು ಬುದ್ಧಿಶಕ್ತಿಯುಳ್ಳವನು, ಪ್ರಬುದ್ಧನು, ಮುಸ್ಲಿಂ ಅಥವಾ ಗ್ರಂಥದವನಾಗಿರಬೇಕು, 2- ಕೊಯ್ಯುವ ಆರಂಭದಲ್ಲಿ ಅಲ್ಲಾಹನ ಹೆಸರನ್ನು ಉಚ್ಚರಿಸಬೇಕು, 3- ಕೊಯ್ಯುವುದಕ್ಕೆ ಬಳಸುವ ಉಪಕರಣದ ಯೋಗ್ಯತೆ – ಬಳಸುವ ಉಪಕರಣವು ಹಲ್ಲು/ಮೂಳೆ ಮತ್ತು ಉಗುರುಗಳನ್ನು ಹೊರತುಪಡಿಸಿ ಯಾವುದೇ ವಸ್ತುವಿನಿಂದ ಮಾಡಲ್ಪಟ್ಟ ಹರಿತವಾದ ಅಂಚನ್ನು ಹೊಂದಿರಬೇಕು, 4- ನಿಯಂತ್ರಣದಲ್ಲಿರುವ ಪ್ರಾಣಿಯ ವಿಷಯದಲ್ಲಿ, ಕೊಯ್ಯಬೇಕಾದ ಸ್ಥಳದಲ್ಲಿ ಅಂದರೆ ಅನ್ನನಾಳ, ಶ್ವಾಸನಾಳ ಮತ್ತು ಕತ್ತಿನ ಮುಖ್ಯ ರಕ್ತನಾಳಗಳನ್ನು (ವದಜೈನ್) ಕತ್ತರಿಸುವ ಮೂಲಕ ಆಗಬೇಕು.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...